ಕಾಂಗ್ರೆಸ್’ನಿಂದ ಟಿಕೆಟ್ ನೀಡಲು ಮೂರು ಮಾನದಂಡ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಮುಂಬರುವ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮೂರು ಮಾನದಂಡಗಳಿವೆ ಎಂದು ಹೇಳಿದ್ದಾರೆ.
![](http://newsbites.in/wp-content/uploads/2023/01/IMG_20230104_192216-1024x482.jpg)
1.ಗೆಲ್ಲುವ ಸಾಮರ್ಥ್ಯ, 2.ಸಾಮಾಜಿಕ ನ್ಯಾಯ ಮತ್ತು 3.ಪಕ್ಷ ನಿಷ್ಠೆ, ಮಾನದಂಡಗಳಾಗಿವೆ ಎಂದವರು ತಿಳಿಸಿದ್ದಾರೆ.
ಕೊಪ್ಪಳದಲ್ಲಿ
ಪಕ್ಷದ ಕಚೇರಿಯಲ್ಲಿ ಜ.4ರಂದು ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕುರಿತು ಪಕ್ಷದ ಪ್ರಮುಖರ ಜೊತೆ ಸಭೆ ನಡೆಸಿದ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.