ಕರಾವಳಿ

ಕಾಲೇಜು ಸಮೀಪ ಲವ್ ಜಿಹಾದ್ ಬ್ಯಾನರ್: ತೆರವಿಗೆ ಆಗ್ರಹ



ಪುತ್ತೂರು: ಇಲ್ಲಿನ ಖಾಸಗಿ ಕಾಲೇಜೊಂದರ ಮುಂಭಾಗದಲ್ಲಿ ಲವ್ ಜಿಹಾದ್ ಗೆ ಸಂಬಂಧಿಸಿದಂತೆ ಬ್ಯಾನರ್ ಅಳವಡಿಸಲಾಗಿದ್ದು, ಇದು ವಿದ್ಯಾರ್ಥಿಗಳ ನಡುವೆ ಕೋಮು ದ್ವೇಷ ಹರಡುವ ಹುನ್ನಾರವಾಗಿದೆ. ಇದನ್ನು ತಕ್ಷಣವೇ ತೆರವು ಗೊಳಿಸಬೇಕೆಂದು NSUI ಪುತ್ತೂರು ಘಟಕದ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ NSUI ಮುಖಂಡ ಭಾತೀಷ್ ಅಳಕೆಮಜಲು, ಅಧ್ಯಕ್ಷ ಚಿರಾಗ್ ರೈ, ಪ್ರಧಾನ ಕಾರ್ಯದರ್ಶಿ ಎಡ್ವರ್ಡ್ ಡಿಸೋಜ, NSUI ಮುಖಂಡ ಮಹಮ್ಮದ್ ಸೈಫ್, ನಗರ NSUI ಪ್ರಧಾನ ಕಾರ್ಯದರ್ಶಿ ಆಸ್ಟನ್ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!