ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತದಿಂದ ಬೇಸತ್ತಿರುವ ಜನತೆ ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ- ದಿವ್ಯಪ್ರಭಾ ಗೌಡ
ಕಾಂಗ್ರೆಸ್ ಗೆ ಇರುವ ಜನಬೆಂಬಲವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅನ್ಯ ಮಾರ್ಗದಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕುವ ಬಿಜೆಪಿಯ ಪ್ರಯತ್ನ ಹಿಂದೆಯೂ ವಿಫಲವಾಗಿದೆ, ಮುಂದೆಯೂ ಅಸಾಧ್ಯ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ, ಈ ಬಾರಿಯ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿರುವ ದಿವ್ಯ ಪ್ರಭಾ ಗೌಡ ಚಿಲ್ತಡ್ಕ ತಿಳಿಸಿದ್ದಾರೆ.
![](http://newsbites.in/wp-content/uploads/2022/11/IMG-20221103-WA0298-1024x682.jpg)
ಭ್ರಷ್ಟಾಚಾರ, ದುರಾಡಳಿತದಿಂದ ಬೇಸತ್ತಿರುವ ಜನರು ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ.
ಬಿಜೆಪಿಯ ಖಾಲಿ ಕುರ್ಚಿಗಳ ಸಮಾವೇಶ ಜನರ ಆಕ್ರೋಶವನ್ನು ಎತ್ತಿ ತೋರಿಸುತ್ತಿದೆ ಎಂದು ಅವರು ತಿಳಿಸಿದರು.
ಜನರು ಬದಲಾವಣೆ ಬಯಸಿದ್ದು ಜನರು ಅಭಿವೃದ್ಧಿಯನ್ನು ಎದುರು ನೋಡುತ್ತಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ಸಿಗೆ ಜನತಾ ಆಶೀರ್ವಾದ ಮಾಡಲಿದ್ದಾರೆ, ಕಾಂಗ್ರೆಸ್ ವಿರುದ್ಧದ ಬಿಜೆಪಿ ಎಲ್ಲ ತಂತ್ರಗಳು ವಿಫಲವಾಗಲಿದೆ ಎಂದು ದಿವ್ಯ ಪ್ರಭಾ ಗೌಡ ತಿಳಿಸಿದ್ದಾರೆ