ಕರಾವಳಿ

ಪುತ್ತೂರು: ಸಾಂತ್ಯದಲ್ಲಿ ನವ ವಿವಾಹಿತೆ ಆತ್ಮಹತ್ಯೆ



ಪುತ್ತೂರು: ಕೆಲವು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆಯೊಬ್ಬರು  ನೇಣಿಗೆ ಶರಣಾದ ಘಟನೆ  ನ.5ರಂದು ಸಂಜೆ  ಮಾಡನ್ನೂರು ಗ್ರಾಮದ ಸಾಂತ್ಯ  ಎಂಬಲ್ಲಿ  ನಡೆದಿದೆ.


ಸಾಂತ್ಯ ನಿವಾಸಿ ಜಯಪ್ರಕಾಶ್  ಅವರ ಪತ್ನಿ ವೈಶಾಲಿ (26) ಆತ್ಮಹತ್ಯೆ ಮಾಡಿಕೊಂಡವರು.
ವೈಶಾಲಿ ಅವರ ವಿವಾಹ  ಜಯಪ್ರಕಾಶ್ ಅವರ  ಜತೆ  7 ತಿಂಗಳ  ಹಿಂದೆಯಷ್ಟೇ ನಡೆದಿತ್ತು. ವೈಶಾಲಿ ಅವರು  ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ತಾಯಿ ನೀಡಿದ  ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ  ಪ್ರಕರಣ  ದಾಖಿಲಾಗಿದೆ.

Leave a Reply

Your email address will not be published. Required fields are marked *

error: Content is protected !!