ರಾಜ್ಯ

ಭಗತ್‌ ಸಿಂಗ್ ನೇಣುಗಂಬಕ್ಕೆ ಏರುವ ಪಾತ್ರದ ಪ್ರಾಕ್ಟೀಸ್ -ವಿದ್ಯಾರ್ಥಿ ದಾರುಣ ಸಾವು



ಚಿತ್ರದುರ್ಗ: ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್ ನೇಣುಗಂಬಕ್ಕೆ ಏರುವ ಪಾತ್ರದ ಅಭ್ಯಾಸದ ವೇಳೆ ಆಕಸ್ಮಿಕ ವಾಗಿ ಹಗ್ಗವು ಕೊರಳಿಗೆ ಉರುಳಾಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ದಾರುಣ ಘಟನೆ ನಡೆದಿದೆ.

ನಗರದ ಕೆಳಗೋಟೆ ನಿವಾಸಿ ನಾಗರಾಜ ಅವರ ಮಗ, ಎಸ್‌ಎಲ್‌ವಿ ಶಿಕ್ಷಣ ಸಂಸ್ಥೆಯಲ್ಲಿ 7ನೇ ತರಗತಿ ಓದುತ್ತಿದ್ದ ಸಂಜಯ್ ಗೌಡ (12) ಮೃತ ವಿದ್ಯಾರ್ಥಿ.

‘ರಾಜ್ಯೋತ್ಸವದ ಅಂಗವಾಗಿ ನ. 1ರಂದು ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಗತ್‌ಸಿಂಗ್ ಪಾತ್ರವನ್ನು ಸಂಜಯ್‌ಗೆ ನೀಡಲಾಗಿತ್ತು. ಮನೆಯಲ್ಲಿ ಯಾರೂ ಇಲ್ಲದಾಗ ಆ ಪಾತ್ರದ ಅಭ್ಯಾಸ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ’ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!