ಕರಾವಳಿಕ್ರೈಂ

ದ್ವೇಷ ಭಾಷಣ: ಶಾಸಕ ಯಶ್‌ಪಾಲ್‌  ಸುವರ್ಣ ವಿರುದ್ಧ ಎಫ್‌ಐಆರ್


ಉಡುಪಿ: ಉಡುಪಿಯಲ್ಲಿ ಜುಲೈ 28 ರಂದು ನಡೆದ ಕಾಂಗ್ರೆಸ್ ಮತ್ತು ‘ಕಾಕ್ರೋಚ್ ಪಾರ್ಟಿ’ ವಿರುದ್ಧದ ಪ್ರತಿಭಟನೆಯಲ್ಲಿ ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಅವರು ಮಾಡಿದ ಭಾಷಣ ಇದೀಗ ವಿವಾದಕ್ಕೆ ಕಾರಣವಾಗಿದೆ.



ಪ್ರತಿಭಟನೆಯ ವೇಳೆ “ಬಾಬರಿ ಮಸೀದಿಯನ್ನು ಕೆಡವಿದಂತೆಯೇ, ರಾಹುಲ್ ಗಾಂಧಿಯವರ ವಂಶವೂ ನಾಶವಾಗುತ್ತದೆ” ಎಂದು ಶಾಸಕರು ಹೇಳಿಕೆ ನೀಡಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ಕಾಂಗ್ರೆಸ್ ನಾಯಕರು ನೀಡಿದ ದೂರಿನ ಮೇರೆಗೆ, ಪೊಲೀಸರು ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

 



ಜುಲೈ 29 ರ ಬುಧವಾರ ಸಂಜೆ, ಉಡುಪಿ ಪೊಲೀಸ್ ಠಾಣೆಯ ತನಿಖಾಧಿಕಾರಿ ಸುವರ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ನೋಟಿಸ್ ನೀಡಿದ್ದಾರೆ. ನೋಟಿಸ್‌ ಸ್ವೀಕರಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇನ್ನೂ ಮಾದಕ ವಸ್ತುಗಳ ಪ್ರಭಾವದಲ್ಲಿದ್ದಾರೆ ಮತ್ತು ಅವರ ಕುಟುಂಬದ ವಂಶಾವಳಿ ನಾಶವಾಗುತ್ತದೆ ಎಂದು ಶಾಸಕರು ಹೇಳಿಕೊಂಡಿದ್ದರು. ಪೊಲೀಸರು ಈ ಹೇಳಿಕೆಗಳನ್ನು ದ್ವೇಷ ಭಾಷಣ ಎಂದು ಪರಿಗಣಿಸಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!