ಕರಾವಳಿ

ದಾರಂದಕುಕ್ಕು: ಸೈಫುಲ್ ಹುದಾ ಮದ್ರಸದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ



ಪುತ್ತೂರು: 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದಾರಂದಕುಕ್ಕು ಮದ್ರಸ ವಠಾರದಲ್ಲಿ ಧ್ವಜಾಹರೋಹಣವನ್ನು ಸೈಫುಲ್ ಹುದಾ ಮದ್ರಸ ಕಮಿಟಿ ಅಧ್ಯಕ್ಷ ಡಿಕೆ ಉಮ್ಮರ್  ನೆರೆವೇರಿಸಿದರು. ದುವಾ ಮತ್ತು ಪ್ರಾಸ್ತಾವಿಕ  ಭಾಷಣವನ್ನು  ಹಾಜಿ ಯಾಕುಬು ದಾರಿಮಿ ನೆರವೇರಿಸಿದರು.


ಮದ್ರಸಾ ಮಕ್ಕಳು ಸ್ವಾತಂತ್ರೋತ್ಸವದ ಪ್ರಯುಕ್ತ ಹಾಡು ಹಾಗೂ ಭಾಷಣದ ಮೂಲಕ ಸ್ವಾತಂತ್ರ  ಸಂದೇಶವನ್ನು ಸಾರಿದರು. ಕಾರ್ಯಕ್ರಮದಲ್ಲಿ  ಮುಹಿನುಲ್ ಇಸ್ಲಾಂ ಜಮಾಹತ್ ಕಮಿಟಿ ಅಧ್ಯಕ್ಷರು ಅಶ್ರಫ್ ಹಾಜಿ, ಸೈಫುಲ್ ಹುದಾ ಮದ್ರಸ ಕಮಿಟಿಯ ಗೌರವಾಧ್ಯಕ್ಷ ಎ.ಕೆ ಬಶೀರ್ ಹಾಜಿ, SKSSF ದಾರಂದಕುಕ್ಕು ಯೂನಿಟ್ ಉಪಾಧ್ಯಕ್ಷ ಬಶೀರ್ ಮುಸ್ಲಿಯಾರ್, ನೂರುಲ್ ಹುದಾ ಸ್ವಲಾತ್ ಕಮಿಟಿ ಕಾರ್ಯದರ್ಶಿ ನಿಜಾಮ್ ಡಿಕೆ ಹಾಗೂ ಊರಿನ ಹಿರಿಯ ಕಿರಿಯರು, ಮದ್ರಸ ಮಕ್ಕಳು
ಭಾಗವಹಿಸಿದರು.  ಸೈಫುಲ್ ಹುದಾ ಮದ್ರಸ ಕಮಿಟಿ ಕಾರ್ಯದರ್ಶಿ ಡಿಕೆ ಹಕೀಮ್ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!