ಕರಾವಳಿ

ಯುವತಿಗೆ ವಂಚನೆ ಪ್ರಕರಣ: ಸಂತ್ರಸ್ತೆಯ ಮನೆಗೆ ಪ್ರತಿಭಾ ಕುಳಾಯಿ ಭೇಟಿ

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣದ ಸಂತ್ರಸ್ತ ಯುವತಿಯ ಮನೆಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಜು.3ರಂದು ಸಂಜೆ ಭೇಟಿ ನೀಡಿದರು. ಸಂತ್ರಸ್ತೆಯ ತಾಯಿಯೊಂದಿಗೆ ಮಾತನಾಡಿದ ಪ್ರತಿಭಾ ಕುಳಾಯಿ ಅವರು ನೀವು ಹೆದರಬೇಡಿ, ನಿಮ್ಮ ಜೊತೆ ನಾನಿದ್ದೇನೆ, ನಿಮ್ಮ ಖರ್ಚು ವೆಚ್ಚವನ್ನೆಲ್ಲ ನಾನು ಭರಿಸುತ್ತೇನೆ ಎಂದು ಹೇಳಿದರು. ಘಟನೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಜೊತೆ ಮಾತುಕತೆ ಮಾಡುತ್ತೇನೆ ಎಂದರು.

ಪ್ರತಿಭಾ ಕುಳಾಯಿ

ನೀವು ಯಾವುದೇ ಕಾರಣಕ್ಕೂ ಮಾಸ್ಕ್ ಧರಿಸಿಕೊಂಡು ಜೀವನ ಮಾಡಬೇಕಾಗಿಲ್ಲ. ಅಂತಹ ದೊಡ್ಡ ತಪ್ಪು ನೀವು ಮಾಡಿಲ್ಲ. ಇವತ್ತಿಂದ ಮಾಸ್ಕ್ ತೆಗೆದು ಧೈರ್ಯದಿಂದ ಇರಬೇಕು ಎಂದು ಹೇಳಿ, ಸಂತ್ರಸ್ತೆಯ ತಾಯಿ ಮುಖಕ್ಕೆ ಹಾಕಿದ್ದ ಮಾಸ್ಕನ್ನು ತೆಗೆಸಿದರು.
ಇಂತಹ ಘಟನೆಗಳು ನಡೆದಾಗ ಯಾವುದೇ ಕಾರಣಕ್ಕೂ ಮಹಿಳೆಯಾದವಳು ಧೈರ್ಯ ಕಳೆದುಕೊಳ್ಳಬಾರದು ಬದಲಾಗಿ ಅಂಥವರ ವಿರುದ್ದ ಹೋರಾಟ ಮಾಡಬೇಕು ಎಂದು ಪ್ರತಿಭಾ ಕುಳಾಯಿ ಹೇಳಿದರು.

ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಪ್ರತಿಭಾ ಕುಳಾಯಿ ಅವರು, ಇದು ಸರಿಯಾಗಬೇಕಾದರೆ ಮದುವೆ ಆಗಬೇಕು. ಹುಡುಗ ಮುಂದೆ ಬರಬೇಕು, ಏನೋ ಒಂದು ಘಟನೆ
ಆಗಿದೆ. ಇಬ್ಬರಿಂದಲೂ ತಪ್ಪಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬಾರದು, ಈ ಗೊಂದಲ, ಸಮಸ್ಯೆಗೆ ಪರಿಹಾರ ಆಗಬೇಕು ಎಂದರು. ಹುಡುಗನ ಅಪ್ಪ ಜನಪ್ರತಿನಿಧಿಯಾಗಿದ್ದಾರೆ.ತಾಯಿ ಟೀಚರ್ ಆಗಿದ್ದವರು. ಹಾಗಿರುವಾಗ ಇಲ್ಲಿ ಗಲಾಟೆ, ಜಗಳ, ಕೇಸು, ಕೋರ್ಟ್ ಯಾವುದೂ ಬೇಡ ನೀವು ದಯವಿಟ್ಟು ಬನ್ನಿ,ಸಂಧಾನ ಮಾಡಿ.ಹುಡುಗಿ ಮತ್ತು ಮಗುವನ್ನು ಕರೆದುಕೊಂಡು ಹೋಗಿ ಮದುವೆ ಮಾಡಿಸಿ ಎಂದರು. ನಾನು ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ, ಸಂತ್ರಸ್ತೆಯ ತಾಯಿ ಸಮಾನವಾಗಿ ಈ ಕುಟುಂಬದ ಜೊತೆ ನಿಲ್ಲುತ್ತೇನೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!