ಕರಾವಳಿರಾಜ್ಯ

ಅಂತರ್ರಾಷ್ಟ್ರೀಯ ಯುವ ಶೃಂಗಸಭೆಯಲ್ಲಿ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನನ್ನು ಪ್ರತಿನಿಧಿಸಿದ ಡಾ. ವಾಜಿದ ಬಾನು

ಪುತ್ತೂರು: ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ (ರಿ) ಇದರ ಆಪ್ತ ಸಮಾಲೋಚಕಿ ಮತ್ತು ಖ್ಯಾತ ಪ್ರೇರಕಿ ಪುತ್ತೂರಿನ ಡಾ. ವಾಜಿದಾ ಬಾನು ಅವರು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ NSS ವಿಭಾಗ ಮತ್ತು ಯೆನೆಪೋಯ ವಿಶ್ವವಿದ್ಯಾನಿಲಯ  ಸಹಯೋಗದೊಂದಿಗೆ ಆಯೋಜಿಸಲಾದ ಪ್ರತಿಷ್ಠಿತ ಅಂತರರಾಷ್ಟ್ರೀಯ ಜಾಗತಿಕ ಯುವ ಶೃಂಗಸಭೆ-2025 ರಲ್ಲಿ ಎಜುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್ ನ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.

18 ವಿವಿಧ ದೇಶಗಳಿಂದ 1200ಕ್ಕೂ ಹೆಚ್ಚು ಪ್ರತಿನಿಧಿಗಳ ಸಮ್ಮುಖದಲ್ಲಿ ಡಾ. ವಜಿದಾ ಬಾನು “ಐಡಿಯಾ ವರ್ಸ್: ಯೂತ್ ಇನ್ನೋವೇಶನ್ ಫಾರ್ ಎ ನ್ಯೂ ಇಂಡಿಯಾ” ಎಂಬ ವಿಷಯದ ಕುರಿತು ಸ್ಪೂರ್ತಿದಾಯಕ ಮತ್ತು ಪ್ರಭಾವಶಾಲಿ ವಿಚಾರವನ್ನು ಮಂಡಿಸಿದರು. ಅವರ ಭಾಷಣದಲ್ಲಿ ಎಜುಕೇಶನಲ್ ಎಕ್ಸೆಲೆನ್ಸ್ ಫೌಂಡೇಷನ್ ನ ಮೂಲ ಉದ್ದೇಶ, ಬೆಳವಣಿಗೆ ಮತ್ತು ದೃಷ್ಟಿಕೋನವನ್ನು ವಿವರಿಸಿದರು. 

ಶಿಕ್ಷಣ ವ್ಯವಸ್ಥೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಎದುರಿಸುತ್ತಿರುವ ನೈಜ ಸವಾಲುಗಳನ್ನು ಪರಿಹರಿಸುವ ಒಂದು ಉಪಕ್ರಮವಾಗಿ ವಿದ್ಯಾರ್ಥಿ-ಕೇಂದ್ರಿತ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿದರು. ಮಾತ್ರವಲ್ಲದೆ ಶಿಕ್ಷಣದಲ್ಲಿ ಬೆಂಬಲ ವ್ಯವಸ್ಥೆಗಳನ್ನು ಮರು ವ್ಯಾಖ್ಯಾನಿಸುವ ತುರ್ತು ಅಗತ್ಯವನ್ನು ಒತ್ತಿ ಹೇಳಿದರು. ಅವರ ಮಾತುಗಳು  ತನ್ನ ನಾವೀನ್ಯತೆ ಮತ್ತು ಸ್ಪಷ್ಟತೆಗಾಗಿ, ಮನಸ್ಸುಗಳನ್ನು ಬೆಳಗಿಸಿದ್ದಕ್ಕಾಗಿ ಮತ್ತು ಪ್ರಪಂಚದಾದ್ಯಂತದ ಪ್ರತಿನಿಧಿಗಳಿಂದ ಕುತೂಹಲವನ್ನು ಹುಟ್ಟುಹಾಕಿದ್ದಕ್ಕಾಗಿ ಮೆಚ್ಚುಗೆ ಪಡೆಯಿತು. ಎಜುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್ ನ ಧ್ಯೇಯ ಮತ್ತು ಯುವ ಸಮುದಾಯವನ್ನು ಶೈಕ್ಷಣಿಕವಾಗಿ ಸಬಲೀಕರಣಗೊಳಿಸಲು ಅದು ತರುವ ಪರಿಹಾರದಿಂದ ಅನೇಕರು ಪ್ರಭಾವಿತರಾದರು. EEF ಗೆ ಈ ಹೆಮ್ಮೆಯ  ಕ್ಷಣವನ್ನು ತಂದು ಕೊಟ್ಟ ಡಾ. ವಾಜಿದ ಬಾನು ರವರನ್ನು ಸಂಸ್ಥೆಯ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!