ತಾನು ರಚಿಸಿದ ಕಾರ್ಟೂನ್ ಚಿತ್ರವನ್ನು ರಾಹುಲ್ ಗಾಂಧಿಗೆ ನೀಡಿದ ಕುಂಬ್ರ ಸಾರೆಪುಣಿಯ ವಿದ್ಯಾರ್ಥಿ..!
ಪುತ್ತೂರು: ಕುಂಬ್ರ ಸಮೀಪದ ಸಾರೆಪುಣಿಯ ಮಹಮ್ಮದ್ ಜವಾದ್ ಎಂಬ ವಿದ್ಯಾರ್ಥಿ ತಾನು ರಚಿಸಿದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರ ಕಾರ್ಟೂನ್ ಚಿತ್ರವನ್ನು ರಾಹುಲ್ ಗಾಂಧಿಯವರಿಗೆ ನೀಡಿದ್ದಾರೆ.
ಭಾರತ್ ಜೋಡೋ ಯಾತ್ರೆ ಗುಂಡ್ಲುಪೇಟೆ ತಲುಪಿದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರಿಗೆ ಮಹಮ್ಮದ್ ಜವಾದ್ ನೀಡಿದ್ದು ಈ ವೇಳೆ ರಾಹುಲ್ ಗಾಂಧಿ ಖುಷಿಯಿಂದ ಸ್ವೀಕರಿಸಿದ್ದಾರೆ.
ಮಹಮ್ಮದ್ಎ ಜವಾದ್ ಅವರು ಎನ್.ಎಸ್.ಯು.ಐ ಪುತ್ತೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾಗಿದ್ದಾರೆ.