ಬಂಟ್ವಾಳ: ಭಾರೀ ಮಳೆಯಿಂದ ಹಾನಿಗೀಡಾದ ಮನೆಗೆ 50 ಸಾವಿರ ರೂ. ನೆರವು
ಪುತ್ತೂರು: ಭಾರೀ ಮಳೆಯಿಂದಾಗಿ ಹಾನಿಗೀಡಾದ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾ.ಪಂ ವ್ಯಾಪ್ತಿಯ ಮನೆಗೆ ರೂ.50 ಸಾವಿರ ಮೊತ್ತವನ್ನು ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ ನಫೀಸಾರವರ ಮನವಿಯ ಮೇರೆಗೆ ಶಾಸಕ ಜಮೀರ್ ಅಹ್ಮದ್ ಅವರು ನೀಡಿದ್ದಾರೆ.
![](http://newsbites.in/wp-content/uploads/2022/09/c4b44837-99c4-4820-a815-3a8e6a062483.jpg)
ಜಮೀರ್ ಅಹ್ಮದ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದ ನಫೀಸಾರವರು ಮಳೆಯಿಂದ ಮನೆ ಹಾನಿಯಾಗಿರುವ ಬಗ್ಗೆ ಮಾಹಿತಿ ನೀಡಿ ಪರಿಹಾರ ಒದಗಿಸುವಂತೆ ಕೇಳಿಕೊಂಡಿದ್ದು ಇದಕ್ಕೆ ತಕ್ಷಣ ಸ್ಪಂಧಿಸಿದ ಜಮೀರ್ ಅಹ್ಮದ್ ಅವರು ರೂ.50 ಸಾವಿರ ನಗದು ಮೊತ್ತವನ್ನು ನೀಡಿದರು. ಗ್ರಾ.ಪಂ ಸದಸ್ಯೆ ರಶ್ಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.