ಕರಾವಳಿಜಿಲ್ಲೆ

ಬಂಟ್ವಾಳ: ಭಾರೀ ಮಳೆಯಿಂದ ಹಾನಿಗೀಡಾದ ಮನೆಗೆ 50 ಸಾವಿರ ರೂ. ನೆರವು



ಪುತ್ತೂರು: ಭಾರೀ ಮಳೆಯಿಂದಾಗಿ ಹಾನಿಗೀಡಾದ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾ.ಪಂ ವ್ಯಾಪ್ತಿಯ ಮನೆಗೆ ರೂ.50 ಸಾವಿರ ಮೊತ್ತವನ್ನು ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ ನಫೀಸಾರವರ ಮನವಿಯ ಮೇರೆಗೆ ಶಾಸಕ ಜಮೀರ್ ಅಹ್ಮದ್ ಅವರು ನೀಡಿದ್ದಾರೆ. 

ಜಮೀರ್ ಅಹ್ಮದ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದ ನಫೀಸಾರವರು ಮಳೆಯಿಂದ ಮನೆ ಹಾನಿಯಾಗಿರುವ ಬಗ್ಗೆ ಮಾಹಿತಿ ನೀಡಿ ಪರಿಹಾರ ಒದಗಿಸುವಂತೆ ಕೇಳಿಕೊಂಡಿದ್ದು ಇದಕ್ಕೆ ತಕ್ಷಣ ಸ್ಪಂಧಿಸಿದ ಜಮೀರ್ ಅಹ್ಮದ್ ಅವರು ರೂ.50 ಸಾವಿರ ನಗದು ಮೊತ್ತವನ್ನು ನೀಡಿದರು. ಗ್ರಾ.ಪಂ ಸದಸ್ಯೆ ರಶ್ಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!