ಸುಳ್ಯ: ಅನ್ಸಾರಿಯ ಗಲ್ಫ್ ಆಡಿಟೋರಿಯಂಗೆ ಸುಳ್ಯ ಠಾಣಾ ಎಸ್ ಐ ಸಂತೋಷ್, ಸಾಮಾಜಿಕ ಮುಖಂಡ ಎಂ.ಬಿ ಸದಾಶಿವ ಭೇಟಿ
ಸುಳ್ಯ: ನ.29ರಂದು ಉದ್ಘಾಟನೆಗೊಳ್ಳಲಿರುವ ಅನ್ಸಾರಿಯಾ ಗಲ್ಫ್ ಆಡಿಟೋರಿಯಂಗೆ ಸುಳ್ಯ ಠಾಣಾ ಎಸ್ ಐ ಸಂತೋಷ್ ಬಿ ಪಿ ಹಾಗೂ ಸುಳ್ಯ ಸಾಂದೀಪ ಶಾಲಾ ಸಂಚಾಲಕರು ಸಾಮಾಜಿಕ ಮುಖಂಡ ಎಂ ಬಿ ಸದಾಶಿವ ರವರು ಭೇಟಿ ನೀಡಿ ಆಡಿಟೋರಿಯಂ ಕಟ್ಟಡ ವೀಕ್ಷಣೆ ನಡೆಸಿದರು.
ಎಸ್ ಐ ಸಂತೋಷ್ ರವರು ನಾಳೆಯ ಕಾರ್ಯಕ್ರಮದ ಬಗ್ಗೆ ಸಂಘಟಕರು ಆಯೋಜನೆ ಮಾಡಿರುವ ಸ್ಥಳ ಪರಿಶೀಲನೆ ಮತ್ತು ವಾಹನ ಪಾರ್ಕಿಂಗ್ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಸಂಸ್ಥೆಯ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ಪಡೆದುಕೊಂಡು ಶ್ಲಾಘನೆ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ,ಕಟ್ಟಡ ಸಮಿತಿ ಅಧ್ಯಕ್ಷ ಅಬ್ದುಲ್ ಕಾದರ್ ಪಟೇಲ್, ಕೋಶಾಧಿಕಾರಿ ಎಸ್ ಎಂ ಹಮೀದ್,ಗಲ್ಫ್ ಕಮಿಟಿ ಸದಸ್ಯರು ಗಳಾದ ಇಬ್ರಾಹಿಂ ನಡುಬೈಲು, ಅಹಮದ್ ಸಿ ಎ, ರಶೀದ್ ವಿ ಕೆ, ಮುನೀರ್ ವಿ ಕೆ, ಬಶೀರ್ ಇಂದ್ರಾಜೆ,ಸಲೀಮ್,ಇಕ್ಬಾಲ್ ಕನಕಮಜಲು, ಹಿರಿಯರಾದ ಹಮೀದ್ ಬೀಜಕೊಚ್ಚಿ,ಹಾಜಿ ಮುಸ್ತಫಾ ಕೆ ಎಂ,ಶರೀಫ್ ಕಂಠಿ,ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ಸ್, ಹಾಜಿ ರಿಜ್ವಾನ್ ಜನತಾ, ಕೆ ಬಿ ಇಬ್ರಾಹಿಂ,ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಇಲ್ಯಾಸ್ ಮೊದಲಾದವರು ಉಪಸ್ಥಿತರಿದ್ದರು. ಶರೀಫ್ ಸುದ್ದಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.