ಕರಾವಳಿ

ಗೂನಡ್ಕ ವಾಹನ ಅಪಘಾತದ ಗಾಯಳುವಿಗೆ ಉಚಿತ ಸೇವೆ ನೀಡುವ ಮೂಲಕ ಪ್ರಶಂಸೆಗೆ ಪಾತ್ರವಾದ ಸುಳ್ಯ ಆಂಬ್ಯುಲೆನ್ಸ್ ಚಾಲಕ ಮಾಲಕರ ಸಂಘ



ಸುಳ್ಯ: ಗೂನಡ್ಕದಲ್ಲಿ ಸ್ಕೂಟಿ ಹಾಗೂ ಕಂಟೇನರ್ ಅಪಘಾತದಲ್ಲಿ ತೀವ್ರ ಗಾಯಗೊಂಡ ಸ್ಕೂಟಿ ಸವಾರನಿಗೆ ಪ್ರಥಮ ಚಿಕಿತ್ಸೆಗಾಗಿ ಸುಳ್ಯ ಆಂಬುಲೆನ್ಸ್ ಚಾಲಕ ಮಾಲಕ ಸಂಘದ ಸದಸ್ಯ ತಾಜುದ್ದೀನ್ ಟರ್ಲಿ ಸಹಕಾರ ನೀಡಿದ್ದಾರೆ.

ಸುಳ್ಯ KVG ಆಸ್ಪತ್ರೆಗೆ AIKMCC ಸುಳ್ಯ ದ ಅಂಬುಲನ್ಸ್ ನಲ್ಲಿ ತರುವ ಮೂಲಕ ತಾಜುದ್ದೀನ್ ಟರ್ಲಿ ಉಚಿತ ಸೇವೆ ನೀಡಿದರು.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು KMC ಆಸ್ಪತ್ರೆಗೆ ತಲುಪಿಸಲು ಸುಳ್ಯ ಲೈಫ್ ಕೇರ್ ಅಂಬುಲನ್ಸ್ ಸುಳ್ಯ ದ ರಫೀಕ್ ಕೆ ಎಂ ರವರು ಉಚಿತ ಸೇವೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಸಂಘದವರ  ಈ ಸೇವೆ ಪ್ರಶಂಸೆಗೆ ಪಾತ್ರವಾಗಿದೆ.

Leave a Reply

Your email address will not be published. Required fields are marked *

error: Content is protected !!