ಬಿ.ಜೆ.ಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಛಾ ಉಪಾಧ್ಯಕ್ಷರಾಗಿ ಪುತ್ತೂರಿನ ರಫೀಕ್ ದರ್ಬೆ ಆಯ್ಕೆ
ಪುತ್ತೂರು: ಬಿಜೆಪಿ ದ.ಕ ಜಿಲ್ಲಾ ಅಲ್ಪಸಂಖ್ಯಾತ ಮೋರ್ಛಾದ ನೂತನ ಉಪಾದ್ಯಕ್ಷರಾಗಿ ರಫೀಕ್ ದರ್ಬೆ ಆಯ್ಕೆಯಾಗಿದ್ದಾರೆ. ರಫೀಕ್ ದರ್ಬೆಯವರನ್ನು ಪುತ್ತೂರು ನಗರ ಮಂಡಲದ ಸಮ್ಮುಖದಲ್ಲಿ ನಗರ ಮಂಡಲದ ಅದ್ಯಕ್ಷರಾದ ಶಿವಕುಮಾರ್ ಪಿ.ಬಿ ಅವರು
ನಗರ ಮಂಡಲದ ಪದಾಧಿಕಾರಿಗಳ, ಶಕ್ತಿಕೇಂದ್ರ, ಮಹಾಶಕ್ತಿ ಕೇಂದ್ರ ಮತ್ತು ವಿವಿಧ ಮೋರ್ಛಾಗಳ ಮೊದಲ ಸಭೆಯಲ್ಲಿಬಿಜೆಪಿ ಶಾಲು ಹಾಕಿ ಅಭಿನಂದಿಸಿದರು.

ದ.ಕ ಜಿಲ್ಲಾ ಅಲ್ಪಸಂಖ್ಯಾತ ಮೋರ್ಛಾ ರಚನೆಯಾಗಿದ್ದು 25 ಜನರ ಸಮಿತಿ ರಚಿಸಲಾಗಿದೆ. ಪುತ್ತೂರು ತಾಲೂಕಿನಿಂದ ಸೌಕತ್ ಆಲಿ ಹೀರೆಬಂಡಾಡಿ ಮತ್ತು ಉಮ್ಮರಬ್ಬ ಕೆದಿಲ ಇವರನ್ನು ಜಿಲ್ಲಾ ಅಲ್ಪಸಂಖ್ಯಾತ ಮೋರ್ಛಾದ ಸದಸ್ಯರಾಗಿ ಮತ್ತು ರಫೀಕ್ ದರ್ಬೆ ಯವರನ್ನು ಉಪಾದ್ಯಕ್ಷರಾಗಿ ಮೋರ್ಛಾ ಜಿಲ್ಲಾ ಅಧ್ಯಕ್ಷರಾದ ಟಿ.ಎ ಶಾನವಾಜ್ ರವರು ಬಿಜೆಪಿ ಪಕ್ಷದ ವರಿಷ್ಕರ ತೀರ್ಮಾನದಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲರವರ ಆದೇಶದ ಮೇರೆಗೆ ಆಯ್ಕೆ ಮಾಡಲಾಗಿದೆ.
ಪುತ್ತೂರು ಮಾಜಿ ಶಾಸಕ ಸಂಜೀವ ಮಟಂದೂರು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್ ಗೌರಿ, ನಗರಸಭಾ ಅಧ್ಯಕ್ಷರಾದ ಲೀಲಾವತಿ, ಉಪಾಧ್ಯಕ್ಷರಾದ ಬಾಲಚಂದ್ರ, ಜಿಲ್ಲಾ ಬಿಜೆಪಿ ಸಂಚಾಲಕರಾದ ಚಂದ್ರಶೇಖರ್ ಬಪ್ಪಳಿಗೆ, ಸದಸ್ಯತಾ ಅಭಿಯಾನದ ಜಿಲ್ಲಾ ಸಂಚಾಲಕರಾದ ನಿತೀಶ್ ಕುಮಾರ್ ಶಾಂತಿವನ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್, ನಿಕಟಪೂರ್ವ ಗ್ರಾಮಾಂತರ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಅನಿಲ್ ತೆಂಕಿಲ, ನಗರ ಮಂಡಲ ಕಾರ್ಯದರ್ಶಿ ನಾಗೇಶ್ ಪ್ರಭು, ಉಪಾದ್ಯಕ್ಷರಾದ ಯುವರಾಜ್ ಪೆರ್ಯತ್ತೊಡಿ, ಹರಿಪ್ರಸಾದ್ ಯಾದವ್ ಇನ್ನಿತರರು ಮತ್ತು ಮಂಡಲದ ಕಾರ್ಯಕರ್ತರು ಉಪಸ್ಥಿತರಿದ್ದರು.