ಕರಾವಳಿಕ್ರೈಂ

ಕುಂಬ್ರ: ಸಿಡಿಲು ಬಡಿದು ಕೂಲಿ ಕಾರ್ಮಿಕ ಮೃತ್ಯು


ಪುತ್ತೂರು: ತನ್ನ ಮನೆಯ ಸಮೀಪ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಕೂಲಿ ಕಾರ್ಮಿಕರೊರ್ವರು ಮೃತಪಟ್ಟ ಘಟನೆ ಮೇ.21 ರಂದು ಸಂಜೆ ಒಳಮೊಗ್ರು ಗ್ರಾಮದ ಪಲ್ಲತ್ತಾರು ಎಂಬಲ್ಲಿಂದ ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಕಲ್ಲಡ್ಕ ಪಲ್ಲತ್ತಾರು ನಿವಾಸಿ ಪಿ.ಬಾಬು (55ವ)ಎಂದು ಗುರುತಿಸಲಾಗಿದೆ. ಬಾಬುರವರು ಸಂಜೆ ವೇಳೆ ತನ್ನ ಮನೆಯ ಸಮೀಪ ಕಟ್ಟಿಗೆ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಂದಿದ್ದು ಇದರಿಂದ ಆಘಾತಗೊಂಡ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತರು ಪತ್ನಿ ಶಾಲಿನಿ, ಪುತ್ರ ಹರ್ಷಿತ್ ,ಪುತ್ರಿ ಹರ್ಷೀತಾ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಸಹಿತ ಹಲವು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!