ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಮಾಡಿ: ಕೆಎಸ್ಆರ್ಟಿಸಿಗೆ ಸೂಚನೆ ನೀಡಿದ ಶಾಸಕ ಅಶೋಕ್ ರೈ
ಪುತ್ತೂರು: ಕೆಲವು ರೂಟ್ ಗಳಲ್ಲಿ ಬಸ್ಸು ಹೋಗುತ್ತಿಲ್ಲ,ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳಿದೆ. ಯಾವ ರೂಟುಗಳಲ್ಲೂ ಬಸ್ ಸಮಸ್ಯೆ ಆಗಬಾರದು, ಯಾರಿಗೂ ತೊಂದರೆಯಾಗಬಾರದು ಇದಕ್ಕೆ ಬೇಕಾಗಿ ಏನು ಮಾಡ್ತೀರೋ ಆ ವ್ಯವಸ್ಥೆ ಮಾಡಿ ಎಂದು ಕೆಎಸ್ ಆರ್ ಟಿಸಿಗೆ ಶಾಸಕರು ಕೆಡಿಪಿ ಸಭೆಯಲ್ಲಿ ಸೂಚನೆ ನೀಡಿದರು.
![](https://newsbites.in/wp-content/uploads/2023/10/FB_IMG_1698049565476-792x1024.jpg)
ವಿಟ್ಲದ ಅಳಿಕೆ,ಪಾಣಾಜೆ ಭಾಗದಲ್ಲಿಬಸ್ ಸಮಸ್ಯೆ ಇದೆ. ಸಾಕಷ್ಟು ಬಸ್ ಇದೆ, ಚಾಲಕರೂ ಇದ್ದಾರೆ ಆದರೆ ನಿರ್ವಾಹಕರ ಕೊರತೆ ಎಂಬ ಮಾಹಿತಿ ಇದ್ದು ನಿರ್ವಾಹಕರ ಸಮಸ್ಯೆಯ ಬಗ್ಹೆ ಸಚಿವರಜೊತೆ ಮಾತನಾಡುತ್ತೇನೆ ಎಂದು ಶಾಸಕರು ತಿಳಿಸಿದರು.