ಕರಾವಳಿಕ್ರೈಂ

ಪುತ್ತೂರು: ಉದ್ಯೋಗ ನೀಡುವುದಾಗಿ ಆಮಿಷವೊಡ್ಡಿ ಯುವತಿಯಿಂದ ಹಣ ಪಡೆದು ವಂಚನೆ



ಪುತ್ತೂರು: ಉದ್ಯೋಗ ನೀಡುವುದಾಗಿ ಆಮಿಷವೊಡ್ಡಿ ಯುವತಿಯೊಬ್ಬರಿಂದ ಹಂತ ಹಂತವಾಗಿ ಹಣ ಪಡೆದು ವಂಚನೆ ಮಾಡಿರುವ ಘಟನೆಯೊಂದು ನಡೆದ ಬಗ್ಗೆ ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ನಿಶ್ಮಿತಾ ವಂಚನೆಗೊಳಗಾಗಿದ್ದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ. 2023 ರ ಜೂ.12 ರಂದು ಪತ್ರಿಕೆಯೊಂದರಲ್ಲಿ ಪರಿಶೀಲಿಸಿ, ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆಮಾಡಿ ವಿಚಾರಿಸಿ, ಬಳಿಕ ಅವರುಗಳು ಸೂಚಿಸಿದಂತೆ 2023 ರ ಜೂ.28 ರಿಂದ 2024 ರ ಜ.12 ರ ತನಕ ಹಂತ ಹಂತವಾಗಿ ಅಪರಿಚಿತ ಆರೋಪಿ ತಿಳಿಸಿದ‌ ಬ್ಯಾಂಕ್‌ ಖಾತೆಗಳಿಗೆ ಒಟ್ಟು 2,25,001 ರೂ ಹಣವನ್ನು ಪಾವತಿ ಮಾಡಿದ್ದು, ಈವರೆಗೂ ನಿಶ್ಮಿತಾ ಅವರಿಗೆ ಉದ್ಯೋಗವನ್ನೂ ನೀಡದೇ, ಹಣವನ್ನು ಮೋಸದಿಂದ ಪಡೆದು ವಂಚಿಸಿರುತ್ತಾರೆ. ಈ ಕುರಿತು ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 18-2024 ಕಲಂ:417, 420 IPC ಪ್ರಕರಣ‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

Leave a Reply

Your email address will not be published. Required fields are marked *

error: Content is protected !!