ಕರಾವಳಿಕ್ರೀಡೆ

ಅನಾರೋಗ್ಯದಲ್ಲಿರುವ ಕ್ರೀಡಾ ಪಟುವಿಗೆ ನೆರವಾದ ಸರ್ವೆಯ ಸೌಹಾರ್ದ ವೇದಿಕೆ



ಪುತ್ತೂರು: ಕಿಡ್ನಿ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿರುವ ಯುವ ಕ್ರೀಡಾ ಪಟು ರವಿ ಮುರುಳ್ಯ ಅವರಿಗೆ ಸರ್ವೆ ಸೌಹಾರ್ದ ವೇದಿಕೆ ವತಿಯಿಂದ ಕ್ರೀಡಾಭಿಮಾನಿಗಳ ಸಹಕಾರದಿಂದ ಸಂಗ್ರಹಿಸಲಾದ ರೂ.10,000 ಮೊತ್ತವನ್ನು ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿಯವರು ಹಸ್ತಾಂತರಿಸಿದರು. ರವಿ ಅವರು ಕ್ರಿಕೆಟ್ ಪಟು ಆಗಿದ್ದು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದು ಕಿಡ್ನಿ ಸಂಬಂಧಿತ ಖಾಯಿಲೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರವಿ ಅವರ ಸಂಕಷ್ಟ ತಿಳಿದ ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ನೇತೃತ್ವದಲ್ಲಿ ಕ್ರೀಡಾಭಿಮಾನಿಗಳಿಂದ ಸಂಗ್ರಹಿಸಿ 10,000 ರೂ ಮೊತ್ತವನ್ನು ರವಿ ಅವರಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದು ವ್ಯಾಪಕ ಮೆಚ್ಚುಗೆಗೂ ಪಾತ್ರವಾಗಿದೆ. ರೋಗಿಗಳಿಗೆ ಸಹಾಯ ಮಾಡುವುದು ನಮ್ಮ ಬಾಧ್ಯತೆಯಾಗಿದ್ದು ಈ ನಿಟ್ಟಿನಲ್ಲಿ ಯುವ ಕ್ರೀಡಾಪಟು ರವಿ ಮುರುಳ್ಯ ಅವರಿಗೆ ಸಣ್ಣ ಮಟ್ಟಿನಲ್ಲಿ ನೆರವು ನೀಡಿದ್ದೇವೆ. ಸರ್ವೆ ಸೌಹಾರ್ದ ವೇದಿಕೆ ಹಿಂದಿನಿಂದಲೂ ಕ್ರೀಡೆ ಜೊತೆಗೆ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!