ಸಂಪ್ಯ : ರಿಕ್ಷಾ ತಂಗುದಾಣಕ್ಕೆ ಶಾಸಕರಿಂದ ಅನುದಾನ
ಪುತ್ತೂರು: ಸಂಪ್ಯ ಠಾಣೆಯ ಮುಂಭಾಗದಲ್ಲಿ ರಿಕ್ಷಾ ತಂಗುದಾಣ ನಿರ್ಮಾಣಕ್ಕೆ ಶಾಸಕರಾದ ಅಶೋಕ್ ರೈ ಯವರು ರೂ 5 ಲಕ್ಷ ಅನುದಾನ ಮೀಸಲಿರಿಸಿದ್ದು ಶಾಸಕರರಿಗೆ ಚಾಲಕರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
![](https://newsbites.in/wp-content/uploads/2024/01/img-20240104-wa00342251652167415173869-1024x576.jpg)
ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ರಿಕ್ಷಾ ತಂಗುದಾಣ ನಿರ್ಮಾಣವಾಗಬೇಕೆಂಬ ಬೇಡಿಕೆ ಈ ಬಾರಿ ಈಡೇರಿದೆ ಎಂದು ಚಾಲಕರು ಹರ್ಷ ವ್ಯಕ್ತಪಡಿಸಿದರು.
ಆಟೋ ಚಾಲಕ ಮಾಲಕರ ಸಂಘ ಸಂಪ್ಯ ಹಾಗೂ ಗೆಳೆಯರ ಬಳಗ ಸಂಪ್ಯ ಇದರ ಸಭೆಯು ಸಂಪ್ಯದಲ್ಲಿ ನಡೆಯಿತು. ಸಭೆಯಲ್ಲಿ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅಶೋಕ್, ಸಲಾಂ ಸಂಪ್ಯ, ರಾಮಕೃಷ್ಣ ಕೊಟ್ಟಾರ್, ಶಾಂತಪ್ಪ, ವಿಠಲ, ಲಿಂಗಪ್ಪ ಗೌಡ, ಖಾದರ್, ದೀಕ್ಷಿತ್, ಕರೀಂ ಶರೀಫ್, ಸದಾಶಿವ, ಹರೀಶ್ ಬಾರಿಕೆ, ನಾರಾಯಣ, ಸುರೇಶ್ ಪೂಜಾರಿ,ರಮೇಶ್ ಬಾರಿಕೆ, ಪ್ರಶಾಂತ್ ರೈ, ಇಸ್ಮಾಯಿಲ್ ವಾಗ್ಳೆ, ಮಂಜಪ್ಪ ಗೌಡ, ಮೊಯಿದಿನ್ ಅರಫಾ, ನಾರಾಯಣ ತಿಂಗಳಾಡಿ ಮತ್ತಿತರರು ಉಪಸ್ಥಿತರಿದ್ದರು.