ರಾಷ್ಟ್ರೀಯ

ಲೋಕಸಭೆ ಅಧಿವೇಶನ ವೇಳೆ ಸದನಕ್ಕೆ ನುಗ್ಗಿದ ಅಪರಿಚಿತರು



ನವದೆಹಲಿ: ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ವೀಕ್ಷಕರ ಗ್ಯಾಲರಿಯಲ್ಲಿದ್ದ ಇಬ್ಬರು ಅಪರಿಚಿತರು ಸದನಕ್ಕೆ ನುಗ್ಗಿರುವ ಘಟನೆ ಇಂದು ಇಂದು ವರದಿಯಾಗಿದೆ.

ಅಪರಿಚಿತರು ಸಂಸದರು ಕೂರುವ ಬೆಂಚುಗಳ ಮೇಲೆ ಓಡಾಡಿದ್ದು ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ನೂತನ ಸಂಸತ್ ಭವನದಲ್ಲಿ ಉಂಟಾದ ಭದ್ರತಾ ಲೋಪದಿಂದ ಸಂಸದರು ಗಲಿಬಿಲಿ ಹಾಗೂ ಭಯಗೊಂಡ ಗೊಂಡ ಘಟನೆ ನಡೆಯಿತು.
ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

Leave a Reply

Your email address will not be published. Required fields are marked *

error: Content is protected !!