ಸವಣೂರು: ಬಡ ವಿಧವೆಗೆ ಮನೆ ಹಸ್ತಾಂತರ
ಸವಣೂರು ವೆಲ್ಫೇರ್ ಅಸೋಸಿಯೇಶನ್ ಜುಬೈಲ್ ಮತ್ತು ಸ್ಥಳೀಯ ಎಸ್.ಡಿ.ಪಿ.ಐ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರ ಸಹಕಾರದಿಂದ ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡಿಲ ಪ್ರದೇಶದಲ್ಲಿ ಬಡ ವಿಧವೆ ಮಹಿಳೆಗೆ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು
![](https://newsbites.in/wp-content/uploads/2023/12/IMG_20231205_151615-1024x378.jpg)
ಚಾಪಲ್ಲ ಬದ್ರೀಯ ಜುಮಾ ಮಸ್ಜಿದ್ ಮದರ್ರೀಸ್ ಬಹು ಮಹಮ್ಮದ್ ಅಶ್ರಫ್ ಪಾಝಿಲ್ ಬಾಖವಿ ದುವಾಶಿರ್ವಚನಗೈದರು. ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ ಕೀಲಿ ಕೈ ಹಸ್ತಾಂತರಿಸಿ ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ರಝಾಕ್ ಕೆನರಾ, ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ರಫೀಕ್ ಎಂ ಎ,
ಅಬೂಬಕ್ಕರ್ ಮುಸ್ಲಿಯಾರ್ ಕಾಯರ್ಗ,
ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಜುಬೈಲ್ ಇದರ ಅಧ್ಯಕ್ಷರಾದ ಹಾಜಿ ಮಹಮ್ಮದ್ ಬಸ್ತಿ, ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷರಾದ ಝಕರಿಯಾ ಮಾಂತೂರು, ಉದ್ಯಮಿಗಳಾದ ಅಬ್ದುಲ್ ಖಾದರ್ ಹಾಜಿ, ಅಬ್ಬಾಸ್ ಹಾಜಿ ಕೆಲೆಂಬಿರಿ ಮತ್ತು ಇತರರು ಉಪಸ್ಥಿತರಿದ್ದರು.