ಅಂತಾರಾಷ್ಟ್ರೀಯಕ್ರೀಡೆ

ಭಾರತ ಶ್ರೀಲಂಕಾ ಏಷ್ಯ ಕಪ್ ಕ್ರಿಕೆಟ್ ಫೈನಲ್: ಸಿರಾಜ್ ದಾಳಿಗೆ ತತ್ತರಿಸಿದ ಲಂಕ



ಭಾರತ ಹಾಗೂ ಶ್ರೀಲಂಕಾ ನಡುವೆ ಏಷ್ಯಾ ಕಪ್ ಕ್ರಿಕೆಟ್ ಫೈನಲ್ ಪಂದ್ಯಾಟ ನಡೆಯುತ್ತಿದ್ದು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಶ್ರೀಲಂಕಾ ಭಾರತದ ವೇಗಿ ಮಹಮ್ಮದ್ ಸಿರಾಜ್ ಅವರ ಮಾರಕ ವೇಗಕ್ಕೆ ತತ್ತರಿಸಿದೆ.ಇತ್ತೀಚಿನ ಮಾಹಿತಿ ಪ್ರಕಾರ ಶ್ರೀಲಂಕಾ 10 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಕೇವಲ 31 ರನ್ ಗಳಿಸಿ ಒತ್ತಡದಲ್ಲಿದೆ. 

ಮಹಮ್ಮದ್ ಸಿರಾಜ್ ಅವರು ನಾಲ್ಕು ಓವರ್ ಎಸೆದಿದ್ದು ಕೇವಲ ಆರು ರನ್ ಬಿಟ್ಟು ಕೊಟ್ಟು ಪ್ರಮುಖ ಐದು ವಿಕೆಟ್ ಪಡೆದುಕೊಂಡಿದ್ದಾರೆ. ಸಿರಾಜ್ ಅವರು ಪಂದ್ಯದ ನಾಲ್ಕನೇ ಹಾಗು ತಾನೆಸೆದ ಎರಡನೇ ಓವರಿನಲ್ಲಿ ನಾಲ್ಕು ವಿಕೆಟ್ ಕಬಳಿಸಿ ಪರಾಕ್ರಮ ಮೆರೆದಿದ್ದಾರೆ. ಜಸ್ಪ್ರಿತ್ ಬುಮ್ರಾ 1 ವಿಕೆಟ್ ಸಂಪಾದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!