ವಿಮೆನ್ ಇಂಡಿಯಾ ಮೂವ್ಮೆಂಟ್ ಪುತ್ತೂರು ನೂತನ ಸಮಿತಿ ಅಸ್ತಿತ್ವಕ್ಕೆ
ಪುತ್ತೂರು: ವಿಮೆನ್ ಇಂಡಿಯಾ ಮೂವ್ಮೆಂಟ್ (WIM ) ಪುತ್ತೂರು ತಾಲೂಕು ಸಮಿತಿ ರಚನೆಯನ್ನು ಉಪ್ಪಿನಂಗಡಿಯಲ್ಲಿ ನಡೆಸಲಾಯಿತು. ವಿಮೆನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾಧ್ಯಕ್ಷರಾದ ನೌರೀನ್ ಆಲಂಪಾಡಿಯವರ ಸಮ್ಮುಖದಲ್ಲಿ ನೂತನ ಸಮಿತಿ ರಚನೆಯಾಯಿತು.
ಪುತ್ತೂರು ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಝಹಿದ ಸಾಗರ್ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಝರಿನಾ ಉಪ್ಪಿನಂಗಡಿ, ಪ್ರದಾನ ಕಾರ್ಯದರ್ಶಿ ಸೌದ ಮಠ, ಜೊತೆ ಕಾರ್ಯದರ್ಶಿ ಫಾತಿಮಾ ನಿರ್ಮ, ಕೋಶಾಧಿಕಾರಿ ಫಾಹಿನ ನಝೀರ್ ಆಯ್ಕೆಯಾದರು.
ಸದಸ್ಯರುಗಳಾಗಿ ಝುಹರ ಬನ್ನೂರು, ಫೌಝಿಯಾ, ಅಸ್ಮ, ನಾಫೀಸ ಮಠ, ಸಫ್ರೀನಾ ಉಪ್ಪಿನಂಗಡಿ, ಮುಂತಾಝ್ ಇಕ್ಬಲ್, ಶಂನಾಝ್, ಶಾಹಿದ, ನಸೀಮಾ ಕೆ ಎಂ, ನುಷರತ್ತ್ ಕುದ್ರಡ್ಕ ಆಯ್ಕೆಯಾದರು.
ಸಭೆಯನ್ನುದ್ದೇಶಿಸಿ ವಿಮ್ ಜಿಲ್ಲಾದ್ಯಕ್ಷರಾದ ನೌರಿನ್ ಆಲಂಪಾಡಿ ಮಾತನಾಡಿದರು. ಝಹಿದ ಸಾಗರ್ ಸ್ವಾಗತಿಸಿದರು.