ಮಹಾರಾಷ್ಟ್ರದತ್ತ ಸಾಗಿದ ಉಪ್ಪಿನಂಗಡಿಯ ನೌಶಾದ್ ಕಾಲ್ನಡಿಗೆ ಯಾತ್ರೆ
ಪುತ್ತೂರು: ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಿಂದ ಪವಿತ್ರ ಮಕ್ಕಾಗೆ ಕಾಲ್ನಡಿಗೆ ಮೂಲಕ ಯಾತ್ರೆ ಕೈಗೊಂಡಿರುವ ನೌಶಾದ್ ಪೆರಿಯಡ್ಕ ಅವರು ಮಹಾರಾಷ್ಟ್ರದತ್ತ ದಾಪುಗಾಲಿಟ್ಟಿದ್ದಾರೆ.
ನೌಶಾದ್ ಅವರಿಗೆ ಕಾಲ್ನಡಿಗೆ ವೇಳೆ ಜನರಿಂದ ಉತ್ತಮ ಸಹಕಾರ ದೊರಕುತ್ತಿದ್ದು ಅವರನ್ನು ನೋಡಲು ವಿವಿಧ ಕಡೆಗಳಲ್ಲಿ ಸಾಕಷ್ಟು ಜನ ಸೇರುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಅದ್ದೂರಿ ಸ್ವಾಗತ ಲಭಿಸುತ್ತಿದೆ.
ಅನೇಕ ಮುಖಂಡರು ಭೇಟಿ ಮಾಡಿ ಶುಭ ಹಾರೈಸುತ್ತಿದ್ದಾರೆ.