ಕರಾವಳಿಕ್ರೈಂ

ಪುತ್ತೂರು: ಪಿಕಪ್ ವಾಹನದಲ್ಲಿ ದನ ಸಾಗಾಟ ಪತ್ತೆ ಹಚ್ಚಿದ ಪೊಲೀಸರು



ಪುತ್ತೂರು: ಸಂಪ್ಯ ಕಡೆಯಿಂದ ಬೈಪಾಸ್‌ ರಸ್ತೆಯಲ್ಲಿ ಕಬಕ ಕಡೆಗೆ ಪಿಕಪ್‌ ವಾಹನದಲ್ಲಿ ದನ ಸಾಗಾಟ ಮಾಡುತ್ತಿರುವುದನ್ನು ಸೆ.20ರಂದು ಪುತ್ತೂರು ನಗರ ಠಾಣಾ ಪೊಲೀಸರು ಪತ್ತೆ ಹಚ್ಚಿದ್ದಾರೆ.

ನಗರ ಠಾಣಾ ಪಿಎಸ್ಐ ಆಂಜನೇಯ ರೆಡ್ಡಿಯವರು ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿದ್ದ ವೇಳೆ ಬಂದ ಮಾಹಿತಿಯಂತೆ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪರ್ಲಡ್ಕ ಎಂಬಲ್ಲಿ ಪಿಕಪ್‌ ವಾಹನವನ್ನು ನಿಲ್ಲಿಸಿ ನೋಡಿದಾಗ ಪಿಕಪ್‌ ನ ಒಳಗಡೆ ಒಂದು ದನವನ್ನು ಕಟ್ಟಿ ಹಾಕಿದ್ದು, ಆ ದನವನ್ನು ಸಾಗಾಟ ಮಾಡಲು ಚಾಲಕನಲ್ಲಿ ಯಾವುದೇ ಇರಲಿಲ್ಲ ಎಂದು ತಿಳಿದು ಬಂದಿದೆ. ಸದ್ರಿ ದನವನ್ನು ತಿಂಗಳಾಡಿ ಗಟ್ಟಮನೆ ಎಂಬಲ್ಲಿನ ಪೂವಪ್ಪ ಎಂಬವರಿಂದ  ರೂ. 17000/- ಕ್ಕೆ ಖರೀದಿ ಮಾಡಿ ತಂದಿದ್ದು ದನವನ್ನು ಕೆದಿಲದ ಒಂದು ಮನೆಯಲ್ಲಿ ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡಲು ತೆಗೆದುಕೊಂಡು ಬಂದಿರುವುದಾಗಿ ಚಾಲಕ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಾದ
ಕೆದಿಲ ಗ್ರಾಮದವರಾದ ಅಬ್ದುಲ್‌ ಕರೀಂ, ಅಬ್ದುಲ್‌ ಜಮೀರ್‌ ಹಾಗೂ ಪೂವಪ್ಪ ಗಟ್ಟಮನೆ ವಿರುದ್ದ ಪ್ರಕರಣ ದಾಖಲಾಗಿದೆ. ಪ್ರಸ್ತುತ ದನವನ್ನು ಪೊಲೀಸ್‌ ಠಾಣೆಯಲ್ಲಿ ರಕ್ಷಿಸಿಕೊಂಡು ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ.ಅ.ಕ್ರ  ನಂಬರ್ : 82/2025 ಕಲಂ: 4, 5, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ  ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ: 66 ಜೊತೆಗೆ 192(A) IMV ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!