ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಬೃಹತ್ ಮರ- ಸವಾರ ದುರ್ಮರಣ
ಕಾರ್ಕಳ: ಜು.6ರಂದು ರಾತ್ರಿ ಬೆಳ್ಮಣ್ ಬಸ್ ನಿಲ್ದಾಣದ ಪಕ್ಕದಲ್ಲಿರುವ ಬೃಹತ್ ಮರವೊಂದು ಧರೆಗುರುಳಿ ಬೈಕ್ ಸವಾರರೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ. ಕಾರ್ಕಳ-ಪಡುಬಿದ್ರಿ ಹೆದ್ದಾರಿ ಪಕ್ಕದಲ್ಲೇ ಬೆಳ್ಮ ಣ್ ಪೇಟೆಯ ಮಧ್ಯೆ ಇದ್ದ ಮರ ಬಿದ್ದಾಗ ಚಲಿಸುತ್ತಿದ್ದ ಬೈಕ್ ಅದರಡಿ ಸಿಕ್ಕಿಕೊಂಡಿದ್ದು ರಸ್ತೆಗೆ ಬಿದ್ದ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದರು.
![](http://newsbites.in/wp-content/uploads/2023/07/IMG_20230707_094405.jpg)
ಸ್ಥಳೀಯರು ಅವರನ್ನು ಮರದ ನಡುವಿನಿಂದ ಎತ್ತಿ ಆಸ್ಪತ್ರೆಗೆ ಸಾಗಿಸಿದರೂ ಆಸ್ಪತ್ರೆಗೆ ತಲುಪುವ ಮೊದಲೇ ಅವರು ಕೊನೆಯುಸಿರೆಳೆದಿದ್ದರು. ಮೃತ ವ್ಯಕ್ತಿಯನ್ನು ಪ್ರವೀಣ್ ಎಂದು ಗುರುತಿಸಲಾಗಿದೆ.