ಜಿಲ್ಲೆ

ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಬೃಹತ್ ಮರ- ಸವಾರ ದುರ್ಮರಣ



ಕಾರ್ಕಳ: ಜು.6ರಂದು ರಾತ್ರಿ ಬೆಳ್ಮಣ್ ಬಸ್ ನಿಲ್ದಾಣದ ಪಕ್ಕದಲ್ಲಿರುವ ಬೃಹತ್ ಮರವೊಂದು ಧರೆಗುರುಳಿ ಬೈಕ್ ಸವಾರರೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ. ಕಾರ್ಕಳ-ಪಡುಬಿದ್ರಿ ಹೆದ್ದಾರಿ ಪಕ್ಕದಲ್ಲೇ ಬೆಳ್ಮ ಣ್ ಪೇಟೆಯ ಮಧ್ಯೆ ಇದ್ದ ಮರ ಬಿದ್ದಾಗ ಚಲಿಸುತ್ತಿದ್ದ ಬೈಕ್ ಅದರಡಿ ಸಿಕ್ಕಿಕೊಂಡಿದ್ದು ರಸ್ತೆಗೆ ಬಿದ್ದ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದರು.

ಸ್ಥಳೀಯರು ಅವರನ್ನು ಮರದ ನಡುವಿನಿಂದ ಎತ್ತಿ ಆಸ್ಪತ್ರೆಗೆ ಸಾಗಿಸಿದರೂ ಆಸ್ಪತ್ರೆಗೆ ತಲುಪುವ ಮೊದಲೇ ಅವರು ಕೊನೆಯುಸಿರೆಳೆದಿದ್ದರು. ಮೃತ ವ್ಯಕ್ತಿಯನ್ನು ಪ್ರವೀಣ್ ಎಂದು ಗುರುತಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!