ಕರಾವಳಿಕ್ರೈಂ

ಪುತ್ತೂರು: ಸಂಪ್ಯ ಫ್ಲ್ಯಾಟ್’ನಲ್ಲಿ ನೇಣಿಗೆ ಶರಣಾದ ಯುವಕ

ಪುತ್ತೂರು: ಪುತ್ತೂರಿನ ಹೊಟೇಲ್ ಕಾರ್ಮಿಕ ಬಿಹಾರದ ಮೂಲದ ಯುವಕ ಸಂಪ್ಯದಲ್ಲಿ ತಾನು ತಂಗಿರುವ ಫ್ಲಾಟ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇ.21ರಂದು ನಡೆದಿದೆ.

ಬಿಹಾರದ ಮೋತಿಹಲ್‌ ಜಿಲ್ಲೆಯ ಗುಡ್ಡು ಕುಮಾರ್ (19ವ.) ಆತ್ಮಹತ್ಯೆ ಮಾಡಿಕೊಂಡವರು. ಗುಡ್ಡು ಕುಮಾರ್ ಮೂರು ದಿನಗಳ ಹಿಂದೆ ಎಪಿಎಂಸಿ ರಸ್ತೆಯಲ್ಲಿರುವ ಹೊಟೇಲ್ ಒಂದರಲ್ಲಿ ಕೆಲಸಕ್ಕೆ ಸೇರಿ ಹೊಟೇಲ್ ನ ಇತರ ಸಿಬ್ದಿಂದಿಗಳ ಜೊತೆಗೆ ಸಂಪ್ಯದಲ್ಲಿರುವ ಪ್ಲಾಟ್‌ ನಲ್ಲಿ ವಾಸ್ತವ್ಯವಿದ್ದರು. ಬೆಳಿಗ್ಗೆ 9.30 ರ ನಂತರ ಹೋಟೆಲ್‌ ನ ಇಬ್ಬರು ಸಿಬ್ಬಂದಿಗಳು ಪ್ಲಾಟ್ ನಿಂದ ಕೆಲಸಕ್ಕೆ ಹೊರಡುವ ವೇಳೆ ಮಲಗಿದ್ದ ಗುಡ್ಡುಕುಮಾರ್‌ ಪ್ಲಾಟ್‌ ನಲ್ಲಿದ್ದ ಮತ್ತೋರ್ವ ಸಿಬ್ಬಂದಿ ಸ್ನಾನಕ್ಕೆ ತೆರಳಿದ ಸಂದರ್ಭದಲ್ಲಿ ಎರಡೂ ಬಾಗಿಲುಗಳನ್ನು ಬಂದ್ ಮಾಡಿ ಕೊಠಡಿಯೊಳಗಿನ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

Leave a Reply

Your email address will not be published. Required fields are marked *

error: Content is protected !!