ಕರಾವಳಿರಾಜಕೀಯ

ಬಿರುಸಿನ ಬ್ಯಾಟಿಂಗ್ ನಡೆಸಲು ಸಜ್ಜಾದ ಅರುಣ್ ಕುಮಾರ್ ಪುತ್ತಿಲ..!

ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬ್ಯಾಟ್ ಚಿಹ್ನೆ ಸಿಕ್ಕಿದ್ದು ಅವರ ಅಭಿಮಾನಿಗಳು, ಬೆಂಬಲಿಗರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

ಪುತ್ತಿಲ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ ಎಂದು ಪ್ರಚಾರವಾಗಿತ್ತಾದರೂ ಅವರು ನಾಮಪತ್ರ ವಾಪಸ್ ಪಡೆಯದೇ ಚುಣಾವಣಾ ಅಖಾಡದಲ್ಲಿ ತೊಡೆ ತಟ್ಟಿ ನಿಂತಿದ್ದಾರೆ.

ಚುನಾವಣಾ ಕಣದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಎದುರಾಳಿಗಳನ್ನು ಸೋಲಿನ ದವಡೆಗೆ ನೂಕುವ ವಿಶ್ವಾಸದಲ್ಲಿ ಪುತ್ತಿಲ ತಂಡ ಇದೆ.
ಪುತ್ತಿಲ ಅವರನ್ನು ಬ್ಯಾಟ್ ಹಿಡಿದು ಮೈದಾನಕ್ಕೆ ಬಾರದ ಹಾಗೆ ಪ್ರಯತ್ನಗಳು ನಡೆಯಿತಾದರೂ ಹಠ ಬಿಡದ ಪುತ್ತಿಲ ಮೈದಾನಕ್ಕೆ ಇಳಿದೇ ಬಿಟ್ಟಿದ್ದಾರೆ. ಎದುರಾಳಿಯಾಗಿ ಬಲಿಷ್ಠ ತಂಡಗಳಿದ್ದರೂ ಅವುಗಳನ್ನು ಸೋಲಿಸಿ ಗೆಲುವಿನ ನಗೆ ನಾವೇ ಬೀರುತ್ತೇವೆ ಎನ್ನುತ್ತಾರೆ ಪುತ್ತಿಲ ಬೆಂಬಲಿಗರು.

ಪುತ್ತಿಲ ಅವರಿಗೆ ಚುನಾವಣಾ ಆಯೋಗದಿಂದ 7 ಕ್ರಮಾಂಕ ನಂಬರ್ ಸಿಕ್ಕಿದ್ದು 7ನೇ ಕ್ರಮಾಂಕದಲ್ಲಿ ಬಂದು ಧೋನಿ ರೀತಿಯಲ್ಲಿ ಗೇಮ್ ಫಿನಿಶ್ ಮಾಡುತ್ತಾರೆ ಎನ್ನುವ ಆಶಾಭಾವನೆ ಪುತ್ತಿಲ ಬಳಗದವರದ್ದು. ಪುತ್ತಿಲ ಅಬ್ಬರದ ಬ್ಯಾಟಿಂಗ್‌ಗೆ ಕಡಿವಾಣ ಹಾಕಲು ಬಿಜೆಪಿ ಮಾಸ್ಟರ್ ಪ್ಲಾನ್ ಸಿದ್ದಪಡಿಸುತ್ತಿದೆ ಎನ್ನಲಾಗಿದೆ.

ಪುತ್ತಿಲರು ಭರ್ಜರಿ ಬ್ಯಾಟಿಂಗ್ ನಡೆಸಿದ್ದೇ ಆದಲ್ಲಿ ಫಲಿತಾಂಶ ಕುತೂಹಲಕಾರಿಯಾಗಿರಲಿದೆ. ಅಂತಿಮವಾಗಿ ಕಪ್ ಯಾರಿಗೆ ಎನ್ನುವುದು ಮೇ.13ರಂದು ಗೊತ್ತಾಗಲಿದೆ.

Leave a Reply

Your email address will not be published. Required fields are marked *

error: Content is protected !!