ಕರಾವಳಿಕ್ರೈಂ

ಗುತ್ತಿಗಾರು, ಹರಿಹರ ಶಾಲೆಯಿಂದ ಬ್ಯಾಟರಿ ಕದ್ದ ಖದೀಮರ ಬಂಧನ

ಧರ್ಮಸ್ಥಳ ಠಾಣಾ ವ್ಯಾಪ್ತಿಯ ಶಾಲೆಯೊಂದರಿಂದ ಇನ್ವರ್ಟರ್ ಮತ್ತು ಕಂಪ್ಯೂಟರ್ ಕದಿಯಲು ಯತ್ನಿಸುತ್ತಿದ್ದ ವೇಳೆ ಕಳ್ಳರನ್ನು ಅಲ್ಲಿನ ಊರವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಎ.30ರಂದು ನಡೆದಿದ್ದು ಇದೇ ಕಳ್ಳರು ಗುತ್ತಿಗಾರು ಮತ್ತು ಹರಿಹರ ಶಾಲೆಯಿಂದ ಬ್ಯಾಟರಿ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ.



ಸರ್ಕಾರಿ ಪ್ರೌಢಶಾಲೆ ಗುತ್ತಿಗಾರು ಮತ್ತು ಹರಿಹರ ಪ್ರೌಢಶಾಲೆಯಿಂದ ಬ್ಯಾಟರಿ ಕಳ್ಳತನ ಆಗಿರುವ ಬಗ್ಗೆ ಇಲ್ಲಿನ ಮುಖ್ಯೊಪಾದ್ಯಾಯರುಗಳು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಬಂಧನಕ್ಕೊಳಗಾದ ನಾಲ್ವರು ಯುವಕರೇ ಇಲ್ಲೂ ಬ್ಯಾಟರಿ ಕದ್ದವರೆಂದು ತಿಳಿದು ಬಂದಿದೆ.


ರಕ್ಷಿತ್ ಡಿ ದೋಲ ಮನೆ, ಕುಟ್ರಪಾಡಿ ಗ್ರಾಮ, ತೀರ್ಥೇಶ್ಎಂ. ಮೀನಾಡಿಮನೆ, ಕುಟ್ರಪಾಡಿಗ್ರಾಮ, ಯಜ್ಞೇಶ್‌ ಯು.ಕೆ , ಉರುಂಬಿಮನೆ, ಕುಟ್ರಪಾಡಿ ಗ್ರಾಮ, ರೋಹಿತ್‌ ಹೆಚ್.‌ ಶೆಟ್ಟಿ ಹಳ್ಳಿಮನೆ, ಕುಟ್ರಪಾಡಿ ಬಂಧನಕ್ಕೊಳಗಾದ ಆರೋಪಿಗಳು.

Leave a Reply

Your email address will not be published. Required fields are marked *

error: Content is protected !!