ಕರಾವಳಿಕ್ರೈಂ

ಸುಳ್ಯ: ಅಡಿಕೆ ಅಂಗಡಿಯಲ್ಲಿ ಕಳವಿಗೆ ಯತ್ನಿಸಿ ಪಕ್ಕದ ಅಂಗಡಿಯಿಂದ ಗ್ಯಾಸ್ ಸಿಲಿಂಡರ್ ಕಳ್ಳತನ



ಸುಳ್ಯ: ಕನಕಮಜಲು ಸಮೀಪ ಅಡಿಕೆ ಅಂಗಡಿಯೊಂದಕ್ಕೆ ನುಗ್ಗಲು ಯತ್ನಿಸಿದ ಕಳ್ಳರು ಸಮೀಪದ ಅಂಗಡಿಯಿಂದ ಗ್ರಾಹಕರು ತಂದಿರಿಸಿದ್ದ ಐದು ಗ್ಯಾಸ್ ಸಿಲಿಂಡರ್ ಹಾಗೂ ಅಂಗಡಿಯಲ್ಲಿದ್ದ ಹತ್ತು ಸಾವಿರ ರೂ. ನಗದು ಕಳವುಗೈದು ಪರಾರಿಯಾದ ಘಟನೆ ಮಾ.11ರಂದು ರಾತ್ರಿ ನಡೆದಿದೆ.



ಕನಕಮಜಲಿನ ಹಾಜಿ ಎಸ್. ಎ. ಹಮೀದ್ ಅವರ ಮಾಲಕತ್ವದ ಭಾರತ್ ಸುಫಾರಿ ಟ್ರೇಡರ್ಸ್ ಗೆ ಮಧ್ಯರಾತ್ರಿ 2 ಗಂಟೆಗೆ ಬಂದ ಇಬ್ಬರು ಕಳ್ಳರು ಬೀಗ ಒಡೆದಿದ್ದು,ಅಂಗಡಿಯ ಸೈಡ್ ಲಾಕರ್ ಹಾಗೂ ಸೆಂಟರ್ ಲಾಕರ್ ಮುರಿಯಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ.



ಈ ವೇಳೆ ಪಕ್ಕದಲ್ಲಿರುವ ತೀರ್ಥರಾಮ ಸಾರಕೂಟೇಲು ಅವರ ಅಂಗಡಿಗೆಯ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಗ್ರಾಹಕರು ಅಂಗಡಿಯಲ್ಲಿ ತಂದಿರಿಸಿದ್ದ 5 ಗ್ಯಾಸ್ ಸಿಲಿಂಡರ್ ಗಳು, ಡ್ರಾಯರ್ ಸಮೇತ ಹತ್ತು ಸಾವಿರ ನಗದು ಕಳವುಗೈದಿರುವುದಾಗಿ ತಿಳಿದುಬಂದಿದೆ.



ಇಬ್ಬರು ಮುಸುಕುಧಾರಿಗಳು ಕಳುವು ನಡೆಸುತ್ತಿರುವ ದೃಶ್ಯ ಸಿ ಸಿ ಕ್ಯಾಮರಾದಲ್ಲಿ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!