ಕರಾವಳಿ

ಬಸ್ಸಿನಿಂದ ಹೊರಕ್ಕೆಸೆಯಲ್ಪಟ್ಟ ವಿದ್ಯಾರ್ಥಿಗಳು- ವಿಡಿಯೋ ವೈರಲ್



ಪುತ್ತೂರು: ಬಸ್ಸಿನಲ್ಲಿ ನಿಂತುಕೊಳ್ಳಲೂ ಕೂಡಾ ಜಾಗವಿಲ್ಲದ ಕಾರಣ ವಿದ್ಯಾರ್ಥಿಗಳಿಬ್ಬರು ರಸ್ತೆಗೆಸೆಯಲ್ಪಟ್ಟ ವಿಡಿಯೋವೊಂದು ವೈರಲ್ ಆಗುತ್ತಿದ್ದು ಇದು ಕೇರಳ ಕರ್ನಾಟಕ ಗಡಿ ಪ್ರದೇಶವಾಗಿರುವ ಕುಂಟಾರು-ಪುತ್ತೂರು ಪ್ರಯಾಣದ ಬಸ್ಸಿನಲ್ಲಿ ಸಂಭವಿಸಿದ್ದು ಎನ್ನಲಾಗುತ್ತಿದೆ.

 ಕೆಎಸ್‌ಆರ್‌ಟಿಸಿ ಬಸ್ ಚಲಿಸುತ್ತಿದ್ದಂತೆ ವಿದ್ಯಾರ್ಥಿಗಳು ಬಸ್‌ನಿಂದ ಹೊರಕ್ಕೆಸೆಯಲ್ಪಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ವಿದ್ಯಾರ್ಥಿಗಳಿಗೆ ಗಾಯಗಳಾಗಿದೆ ಎನ್ನಲಾಗಿದೆ. ಇದು ಬೆಳಗ್ಗಿನ ಹೊತ್ತಲ್ಲಿ ನಡೆದಿರುವ ಘಟನೆಯಾಗಿದ್ದು ಯಾವ ದಿನದಂದು ಸಂಭವಿಸಿದ್ದು ಮತ್ತು ಸಂಭವಿಸಿದ ಸ್ಪಷ್ಟ ಸ್ಥಳ ಇನ್ನಷ್ಟೇ ತಿಳಿದು ಬರಬೇಕಿದೆ.

ಕುಂಟಾರು-ಪುತ್ತೂರು ಮಧ್ಯೆ ಇದೇ ಪರಿಸ್ಥಿತಿ ಹಲವು ಸಮಯಗಳಿಂದ ಇದ್ದರೂ ಸಂಬಂಧಪಟ್ಟವರು ಇದರ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!