ಕರಾವಳಿ

ಕೆ.ವಿ.ಜಿ ‘ಸುಳ್ಯ ಹಬ್ಬ’ ಆಮಂತ್ರಣ ಬಿಡುಗಡೆ



ಸುಳ್ಯದ ಅಮರ ಶಿಲ್ಪಿ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಹುಟ್ಟು ಹಬ್ಬವನ್ನು ‘ಸುಳ್ಯ ಹಬ್ಬ’ ವನ್ನಾಗಿ ಆಚರಿಸಲಾಗುತ್ತಿದ್ದು ಇದರ ಆಮಂತ್ರಣ ಬಿಡುಗಡೆ ನ.30 ರಂದು ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಕಚೇರಿಯಲ್ಲಿ ನಡೆಯಿತು.

ಡಿ. 25 ಮತ್ತು ಡಿ.26 ರಂದು ಕಾರ್ಯಕ್ರಮ ನಡೆಯಲಿದ್ದು, 25 ರಂದು‌ ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಕಾರ್ಯಕ್ರಮ ನಡೆಯಲಿದ್ದು ಡಿ.26 ರಂದು‌ ಕೆ.ವಿ.ಜಿ. ಕಾನೂನು ಕಾಲೇಜು ಆವರಣದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆಯ ಸಂದರ್ಭ ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯ ಅಧ್ಯಕ್ಷ ದೊಡ್ಡಣ್ಣ ಬರೆಮೇಲು, ಸ್ಥಾಪಕಾಧ್ಯಕ್ಷ ಎನ್.ಜಯಪ್ರಕಾಶ್ ರೈ, ನಿತ್ಯಾನಂದ ಮುಂಡೋಡಿ, ಪಿ.ಸಿ. ಜಯರಾಮ, ಎನ್.ಎ.ರಾಮಚಂದ್ರ, ಎಸ್.ಸಂಶುದ್ದೀನ್, ಡಾ.ಎನ್.ಎ. ಜ್ಞಾನೇಶ್, ಚಂದ್ರಶೇಖರ ಪೇರಾಲು, ಆನಂದ ಖಂಡಿಗ, ಶ್ರೀನಾಥ್ ಆಲೆಟ್ಟಿ, ವಿಜೇಶ್ ಹಿರಿಯಡ್ಕ, ಚಂದ್ರಾಕ್ಷಿ ಜೆ ರೈ, ಹರೀಶ್ ರೈ ಉಬರಡ್ಕ, ದಿನೇಶ್ ಮಡ್ತಿಲ, ಕೀರ್ತನ್ ಕೊಡಪಾಲ, ಶೈಲೇಶ್ ಅಂಬೆಕಲ್ಲು, ಎ.ಸಿ. ವಸಂತ, ಜನಾರ್ದನ ನಾಯ್ಕ್, ಮಾಧವ ಮಡಪ್ಪಾಡಿ, ವಿಠಲ್ ಕಾಯರ್ತೋಡಿ ಮೊದಲಾದವರಿದ್ದರು.

Leave a Reply

Your email address will not be published. Required fields are marked *

error: Content is protected !!