ಕರಾವಳಿ

ಅಮ್ಮಿನಡ್ಕದಲ್ಲಿ ಬೈಕ್, ಲಾರಿ ಡಿಕ್ಕಿ: ಹಿಂಬದಿ ಸವಾರನಿಗೆ ಗಾಯ



ಪುತ್ತೂರು:ಬೈಕ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಅಮ್ಮಿನಡ್ಕದಲ್ಲಿ ನ.23ರಂದು ನಡೆದಿದೆ.

ಪುತ್ತೂರು ಕಡೆ ಬರುತ್ತಿದ್ದ ಬೈಕ್‌ ಮತ್ತು ವಿರುದ್ಧ ದಿಕ್ಕಿನಿಂದ ಹೋಗುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿವೆ. ಸುಳ್ಯ ದೇವಚಳ್ಳ ಬದಿಯಡ್ಕ ನಿವಾಸಿ ವಿನ್ಯಾಸ್ ಅವರು ಬೈಕ್‌ನಲ್ಲಿ ತಂದೆ ಗಿರಿಯಪ್ಪರವರನ್ನು ಹಿಂಬದಿ ಕುಳ್ಳಿರಿಸಿಕೊಂಡು ಬರುತ್ತಿದ್ದ ವೇಳೆ ಅಮಿನಡ್ಕದಲ್ಲಿ ಬೈಕ್ ಮತ್ತು ಲಾರಿಯೊಂದರ ನಡುವೆ ಡಿಕ್ಕಿ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಬೈಕ್‌ ಹಿಂಬದಿ ಗಿರಿಯಪ್ಪ ಗೌಡ ಅವರು ಗಾಯಗೊಂಡಿದ್ದು, ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!