ಕಡಬ: ಗ್ರಾಮ ಪಂಚಾಯತ್ ಸಭೆ ಬಹಿಷ್ಕರಿಸಿ ಧರಣಿ ನಡೆಸಿದ ಸದಸ್ಯರು..!
ಕಡಬ: ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಒ ಅವರು ಸದಸ್ಯರ ನಿರ್ಣಯಕ್ಕೆ ಬೆಲೆ ಕೊಡುತ್ತಿಲ್ಲ, ಅಲ್ಲದೆ ನಿರ್ಣಯ ಪುಸ್ತಕದಲ್ಲಿ ಆಕ್ಷೇಪಣೆ ಬರೆಯಲು ಸದಸ್ಯರಿಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಎಂಟು ಮಂದಿ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಗ್ರಾ.ಪಂ. ಸಭಾಂಗಣದಲ್ಲಿ ಧರಣಿ ಕುಳಿತ ಘಟನೆ ಐತ್ತೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನ.24ರಂದು ನಡೆದಿದೆ.
![](http://newsbites.in/wp-content/uploads/2022/11/IMG_20221124_144110-300x81.jpg)
ಸ್ಥಳಕ್ಕೆ ಮೇಲಾಧಿಕಾರಿಗಳು ಬರಬೇಕು ಎಂದು ಸದಸ್ಯರು ಪಟ್ಟು ಹಿಡಿದ್ದಾರೆ. ಧರಣಿ ಕುಳಿತ ಸದಸ್ಯರ ಆರೋಪವನ್ನು ಅಧ್ಯಕ್ಷರು ಮತ್ತು ಪಿಡಿಒ ನಿರಾಕರಿಸಿದ್ದಾರೆ.