Uncategorized

ಸ್ಕೂಟರ್’ಗೆ ಮಿನಿ ಲಾರಿ ಡಿಕ್ಕಿ: ಕಂಪ್ಯೂಟರ್ ಶಿಕ್ಷಕಿ ದುರ್ಮರಣ



ಕಣ್ಣೂರು: ಸ್ಕೂಟರ್ ಮತ್ತು ಮಿನಿ ಲಾರಿ ನಡುವೆ ಡಿಕ್ಕಿ ಸಂಭವಿಸಿ ಶಿಕ್ಷಕಿರೊಬ್ಬರು ಮೃತಪಟ್ಟಿರುವ ಘಟನೆ ಕಣ್ಣೂರಿನಲ್ಲಿ ನಡೆದಿದೆ.


ಮೃತರನ್ನು ಮುರಿಂಗೋಡಿಯ ಮನೋಜ್ ರಸ್ತೆಯ ಕರಿಪಕಂಡಿಯ ಸಜೀರ್ ಎಂಬವರ ಪತ್ನಿ ರಶೀದಾ ಎಂದು ಗುರುತಿಸಲಾಗಿದೆ. ಪೆರವೂರಿನ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿರುವ ರಶೀದಾ ಅವರು ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ರಶೀದಾ ಸ್ಕೂಟರ್ ನಲ್ಲಿ ಪೆರವೂರು ಇರಿಟ್ಟಿ ರಸ್ತೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಪೊಲೀಸರ ಪ್ರಕಾರ, ಸ್ಕೂಟರ್ ಹಿಂದೆ ಅತಿ ವೇಗದಲ್ಲಿ ಬರುತ್ತಿದ್ದ ಮಿನಿ ಲಾರಿ ಅದಕ್ಕೆ ಡಿಕ್ಕಿ ಹೊಡೆದಿದೆ. ಅವರನ್ನು ಪೆರವೂರಿನ ಸೈರಸ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಅವರ ಪತಿ ಸಜೀರ್ ತೊಂಡಿಯಿಲ್ ಪಟ್ಟಣದಲ್ಲಿ ದಿನಸಿ ವ್ಯಾಪಾರಿಯಾಗಿದ್ದಾರೆ. ಶಹಾದಾ ಫಾತಿಮಾ ಮತ್ತು ಹಿದ್ ಫಾತಿಮಾ ಮಕ್ಕಳು. ರಶೀದಾ ವಿರಾಜಪೇಟೆ ಮೂಲದವರು.

Leave a Reply

Your email address will not be published. Required fields are marked *

error: Content is protected !!