ಜಟ್ಟಿಪ್ಪಳ್ಳ: ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ನ. ಪಂ. ಮುಖ್ಯ ಅಧಿಕಾರಿಗೆ ಮದ್ರಸ ಅಧ್ಯಾಪಕ ಒಕ್ಕೂಟದ ಮನವಿ
ಸುಳ್ಯ: ನಗರ ಪಂಚಾಯತ್ ವ್ಯಾಪ್ತಿಯ ಜಟ್ಟಿಪ್ಪಳ್ಳ ಭಾಗದ ರಸ್ತೆಯು ತೀವ್ರ ಹದಗೆಟ್ಟು ಸಾರ್ವಜನಿಕ ಸಂಚಾರಕ್ಕೆ ಸಂಕಷ್ಟ ಅನುಭವಿಸುತ್ತಿದೆ. ಆದ್ದರಿಂದ ಈ ರಸ್ತೆಯನ್ನು ಅಭಿವೃದ್ಧಿಪಡಿಸಿ ಕೊಡುವಂತೆ ಆಗ್ರಹಿಸಿ ಸುಳ್ಯ ಮದರಸ ಒಕ್ಕೂಟದ ವತಿಯಿಂದ ನಗರ ಪಂಚಾಯತಿ ಮುಖ್ಯ ಅಧಿಕಾರಿ ಎಮ್ ಎಚ್ ಸುಧಾಕರ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
![](http://newsbites.in/wp-content/uploads/2022/11/img-20221108-wa03701369165661870331843.jpg)
ನಿಯೋಗದಲ್ಲಿ ರೇಂಜ್ ಅಧ್ಯಕ್ಷ ಮುಹಮ್ಮದ್ ಸಖಾಫಿ ಮೊಗರ್ಪಣೆ, ಪ್ರಧಾನ ಕಾರ್ಯದರ್ಶಿ ನಿಝಾರ್ ಸಖಾಫಿ ಮುಡೂರು,ಮಿಶನರಿ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ, ಅಧ್ಯಾಪಕರುಗಳಾದ ಹುಸೈನಾರ್ ಮದನಿ ಕುಂಜಿಲ, ಸಿರಾಜ್ ಸಅದಿ ಅಲೆಕ್ಕಾಡಿ ಉಪಸ್ಥಿತರಿದ್ದರು.