ಶೇಕಮಲೆ ಹಿದಾಯತುಲ್ ಇಸ್ಲಾಂ ಮದ್ರಸ: ವಿದ್ಯಾರ್ಥಿ ಸಂಘಕ್ಕೆ ಆಯ್ಕೆ
ಪುತ್ತೂರು: ಶೇಕಮಲೆ ಮುಹಿಯುದ್ದೀನ್ ಜುಮಾ ಮಸ್ಜಿದ್ ಇದರ ಅಧೀನದಲ್ಲಿರುವ ಶೇಕಮಲೆ ಹಿದಾಯತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ತರಬೇತಿ ಕೇಂದ್ರವಾದ ಮಅದನುಲ್ ಖುತಬ ಸಾಹಿತ್ಯ ಸಮಾಜದ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಬಾಸಿತ್, ಉಪಾಧ್ಯಕ್ಷರಾಗಿ ಮುಹಮ್ಮದ್ ಇಹ್ಸಾನ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಅಶ್ಫಾವು ಆಯ್ಕೆಯಾದರು. ಜೊತೆ ಕಾರ್ಯದರ್ಶಿಯಾಗಿ ಸಯ್ಯಿದ್ ಅರ್ಝಾನ್, ಕೋಶಾಧಿಕಾರಿಯಾಗಿ ಅಹ್ಮದ್ ಷಾ, ಕ್ಯಾಂಪಸ್ ಲೀಡರ್ ಆಗಿ ತನ್ವೀರ್, ಮುಹಮ್ಮದ್ ರಿಶಾನ್, ವಿದ್ಯುಚ್ಛಕ್ತಿ ಮಂತ್ರಿಯಾಗಿ ಝುಲೈಫ್, ಸಹಾಝ್, ಆರೋಗ್ಯ ಮಂತ್ರಿಯಾಗಿ ರಶಾದ್, ಫಿಝನ್, ನೀರಾವರಿ ಮಂತ್ರಿಯಾಗಿ ಇಸ್ಮಾಯಿಲ್, ಶಂಸೀರ್, ಹಾಜರಾತಿ ಮಂತ್ರಿಯಾಗಿ ರಯೀಸ್, ಸ್ವಚ್ಛತಾ ಮಂತ್ರಿಯಾಗಿ ಸನ, ಝಹ್ನ, ಟೈಂ ಕೀಪರ್ ಆಗಿ ರಮೀಝ್, ಇಹ್ಸಾನ್, ಗ್ರೂಪ್ ಲೀಡರ್ಸ್ಗಳಾಗಿ ತನ್ವೀರ್, ಬಾಸಿತ್, ಖದೀಜತ್ ಶೈಮಾ ಮತ್ತು ಫಾತಿಮಾ ಸಯೀದಾ ಆಯ್ಕೆಯಾಗಿದ್ದಾರೆ.




