ಧರ್ಮಸ್ಥಳ: ಪೊಲೀಸ್ ಠಾಣೆಯಲ್ಲಿ ದಾಖಲಾದ 2 ಪ್ರಕರಣ ಎಸ್ಐಟಿ ಗೆ ಹಸ್ತಾಂತರಿಸಲು ಆದೇಶ
ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಿನಾಂಕ 01.08.2025 ರಂದು ವರದಿಯಾಗಿದ್ದ ಯು.ಡಿ.ಆರ್ ಸಂಖ್ಯೆ: 35/2025, ಕಲಂ: 174 (3) & (VI) ಸಿ.ಆರ್.ಪಿ.ಸಿ ಪ್ರಕರಣ ಹಾಗೂ ದಿನಾಂಕ:04.08.2025 ರಂದು ವರದಿಯಾಗಿದ್ದ 200/DPS/2025 ದೂರರ್ಜಿಯನ್ನು, ಮುಂದಿನ ವಿಚಾರಣೆಗಾಗಿ ಎಸ್.ಐ.ಟಿ ತಂಡಕ್ಕೆ ಹಸ್ತಾಂತರಿಸುವಂತೆ ಕರ್ನಾಟಕ ರಾಜ್ಯದ ಡಿ.ಜಿ.ಪಿ & ಐ.ಜಿ.ಪಿ ರವರು ಅದೇಶಿಸಿದ್ದಾರೆ ಎಂದು ದಕ ಜಿಲ್ಲಾ ಎಸ್ಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆ.1 ರಂದು ವರದಿಯಾಗಿದ್ದ ಯು.ಡಿ.ಆರ್ ಪ್ರಕರಣ ಹಾಗೂ ಆ.4ರಂದು ಧರ್ಮಸ್ಥಳ ಠಾಣೆಯಲ್ಲಿ ಜಯಂತ್ ಅವರು ನೀಡಿದ ದೂರು ಪ್ರಕರಣ ಮುಂದಿನ ವಿಚಾರಣೆಗಾಗಿ ಕರ್ನಾಟಕ ರಾಜ್ಯದ ಡಿ.ಜಿ.ಪಿ ಮತ್ತು ಐ.ಜಿ.ಪಿಯವರು ಆದೇಶದಂತೆ ಎಸ್ಐಟಿಗೆ ಹಸ್ತಾಂತರಿಸಬೇಕಾಗಿದೆ.