ಕರಾವಳಿ

ನಾಳೆಯಿಂದ 4 ದಿನ ಖುರತುಸ್ಸಾದಾತ್ ಕೂರತ್ ತಂಙಳ್ ಉರೂಸ್  ಸಮಾರಂಭ

ಪುತ್ತೂರು: ಕೂರತ್ ತಂಙಳ್ ಎಂದೇ ಪ್ರಸಿದ್ದರಾಗಿದ್ದ ಖುರತುಸ್ವಾದಾತ್ ಸಯ್ಯದ್ ಫಝಲ್ ಕೊಯಮ್ಮ ತಂಙಳ್ ಅಲ್ ಬುಖಾರಿಯವರ ಹೆಸರಿನಲ್ಲಿ ಉರೂಸ್ ಮುಬಾರಕ್ ಜೂ.26ರಿಂದ 29ರ ತನಕ ಪುತ್ತೂರು ಕೂರತ್ ಫಝಲ್ ನಗರದಲ್ಲಿ ನಡೆಯಲಿದೆ ಎಂದು ಉರೂಸ್ ಸಮಿತಿ ಚೇರ್‌ಮೇನ್ ಕೆ. ಪಿ. ಸಿರಾಜುದ್ದೀನ್ ಸಕಾಫಿ ಕನ್ಯಾನ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.



ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಮತ್ತು ದಕ್ಷಿಣ ಭಾರತದ ಪ್ರಸಿದ್ದ ಧಾರ್ಮಿಕ ಕೇಂದ್ರ ಉಳ್ಳಾಲ ಸಹಿತ ನೂರಾರು ಮೊಹಲ್ಲಾಗಳ ಖಾಝಿಗಳಾಗಿ ಸೇವೆ ಸಲ್ಲಿಸಿದ ತಂಙಳ್ ರವರ ಪ್ರಥಮ ವರ್ಷದ ಅನುಸ್ಮರಣಾ -ಉರೂಸ್ ಕಾರ್ಯಕ್ರಮ ಇದಾಗಿದ್ದು, ಕೇರಳ, ಕರ್ನಾಟಕದ ಸಾವಿರಾರು ಜನರು ಭಾಗವಹಿಸಲಿದ್ದಾರೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ವಿದ್ವಾಂಸರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.


ಜೂ.26ರ ಸಂಜೆ ಗಂಟೆ 4:30ಕ್ಕೆ ಉರೂಸ್ ಸಮಿತಿ ಚೇರ್‌ ಮೆನ್ ಖುದುವತುಸ್ಸಾದಾತ್ ಅಸ್ಸಯ್ಯದ್ ಕೆ.ಎಸ್ ಆಟ್ಟಕ್ಕೋಯ ತಂಙಳ್ ಕುಂಬೋಳ್ ರವರ ನೇತೃತ್ವದಲ್ಲಿ ಮಖಾಂ ಝಿಯಾರತ್ ನೊಂದಿಗೆ ಉರೂಸ್ ಸಮಾರಂಭಕ್ಕೆ ಚಾಲನೆ ದೊರಕಲಿದೆ. ಸಂಜೆ ಗಂಟೆ 5.30ಕ್ಕೆ ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ ಖಾಝಿ ಝೖನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಸ್ಸಯ್ಯದ್ ಅಬ್ದುರಹ್ಮಾನ್ ಸಾದಾತ್ ತಂಙಳ್ ಬಾಅಲವಿ ಅಧ್ಯಕ್ಷತೆ ವಹಿಸಲಿದ್ದಾರೆ. ಮರ್ಕಝ್ ನಾಲೆಡ್ಜ್ ಸಿಟಿ ಡೈರೆಕ್ಟರ್ ಡಾ.ಎ.ಪಿ. ಅಬ್ದುಲ್ ಹಕೀಂ ಅಝಹರಿ ಮುಖ್ಯ ಭಾಷಣ ಮಾಡಲಿದ್ದಾರೆ.



ಜೂ.27ರಂದು ಅಪರಾಹ್ನ 2. ಗಂಟೆಗೆ ಶಾಬ್ದುಲಿ ರಾತೀಬ್ ನಡೆಯಲಿದ್ದು, ಸಂಜೆ 4 ಗಂಟೆಗೆ ಬುರ್ದಾ ಮಜ್ಜಿಸ್‌ ನಡೆಯಲಿದೆ. ಬಳಿಕ ಅಹ್ಲುಲ್ ಅಬಾಲ್ ಮೌಲಿದ್ ನಡೆಯಲಿದೆ. ರಾತ್ರಿ ಗಂಟೆ 8ಕ್ಕೆ ನಡೆಯುವ ನೂರೇ ಫಝಲ್ ಕಾನ್ಸರೆನ್ಸ್‌ ನ್ನು ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಜೂ.28ರ ಬೆಳಿಗ್ಗೆ ಗಂಟೆ 5.30ಕ್ಕೆ ಮಂಕೂಸ್ ಮೌಲಿದ್, ಬೆಳಿಗ್ಗೆ 9 ಗಂಟೆಗೆ ತಾಜುಲ್ ಉಲಮಾ ಮೌಲಿದ್, ಬೆಳಿಗ್ಗೆ 10.30ಕ್ಕೆ ರಿಫಾಈ ರಾತೀಬ್ ಮಜ್ಲಿ ಸ್, ಅಪರಾಹ್ನ 2 ಗಂಟೆಗೆ ಮೊಹಲ್ಲಾ ಸಂಗಮ ನಡೆಯಲಿದೆ. ಸಂಜೆ 4-30ಕ್ಕೆ ನಡೆಯುವ ಸಾಮಾಜಿಕ ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು, ಡಾ. ಯು.ಟಿ. ಇಪ್ಪಿಕಾರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ। ಬ್ರಿಜೇಶ್ ಚೌಟ, ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ, ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜಾ, ಮಾಜಿ ಸಚಿವರಾದ ರಮಾನಾಥ್ ರೈ, ಇಕ್ಸಾಲ್ ಅನ್ಸಾರಿ, ವಿನಯ್ ಕುಮಾರ್ ಸೊರಕೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಂಜೆ ಗಂಟೆ 7ಕ್ಕೆ ನಡೆಯುವ ಉರೂಸ್ ಸಮಾರೋಪ ಸಮಾರಂಭವನ್ನು ರಈಸುಲ್ ಉಲಮಾ ಇ. ಸುಲೈಮಾನ್ ಉಸ್ತಾದ್ ಉದ್ಘಾಟಿಸಲಿದ್ದು ಹಲವಾರು ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಜೂ.29ರಂದು ಬೆಳಿಗ್ಗೆ ಗಂಟೆ 8:30ಕ್ಕೆ ಖಮ್ಮುಲ್ ಖುರ್‌ಆನ್ ಸಮರ್ಪಣೆ ಹಾಗೂ ಬದ್ರ್ ಮೌಲಿದ್ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ತನಕ ನಡೆಯುವ ಮಹಾ ಅನ್ನದಾನದೊಂದಿಗೆ ಉರೂಸ್ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಡ್ವಕೇಟ್ ಮುಹಮ್ಮದ್ ಶಾಕಿರ್ ಮಿತ್ತೂರು, ಕೆ.ವೈ ಹಂಝ ಮದನಿ ಗುರುವಾಯನಕೆರೆ, ಅಬೂಬಕರ್ ಕೂರತ್, ಯೂಸುಫ್ ಗೌಸಿಯ ಸಾಜ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!