ಕರಾವಳಿರಾಜ್ಯ

ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಕೌನ್ಸೆಲಿಂಗ್ ಹಾಗೂ ಸ್ಕಾಲರ್‌ಶಿಪ್ ವಿತರಣೆ, 

ಪುತ್ತೂರು: ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ನೀಡಲ್ಪಡುವ ಸ್ಕಾಲರ್‌ಶಿಪ್ ಯೋಜನೆಗೆ ಈ ಸಾಲಿನಲ್ಲಿ 165 ವಿದ್ಯಾರ್ಥಿಗಳು App ಮೂಲಕ ರಿಜಿಸ್ಟ್ರೆಷನ್ ಮಾಡಿದ್ದಾರೆ. ಪ್ರಥಮ ಸುತ್ತಿನ ಕೌನ್ಸೆಲಿಂಗ್ ಮೇ.9ರಂದು ಪುತ್ತೂರು ಲಯನ್ ಸೇವಾ ಭವನದಲ್ಲಿ ನಡೆದಿದ್ದು , 54 ವಿದ್ಯಾರ್ಥಿಗಳು ಭಾಗವಹಿಸಿದ್ದರು.
2ನೇ ಸುತ್ತಿನ ಕೌನ್ಸೆಲಿಂಗ್ ಮೇ.18ರಂದು ಮಂಗಳೂರು ACE IAS ACADEMY ಯಲ್ಲಿ ನಡೆದಿದ್ದು 11 ವಿದ್ಯಾರ್ಥಿಗಳು ಭಾಗವಹಿಸಿದ್ದರು.
3ನೇ ಸುತ್ತಿನ ಕೌನ್ಸೆಲಿಂಗ್ ಪೋಳ್ಯ ಮದರಸ ಸಭಾಂಗಣದಲ್ಲಿ ನಡೆದಿದ್ದು,  44 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಳೆದ ಸಾಲಿನಲ್ಲಿ ರಿಜಿಸ್ಟರ್ ಮಾಡಿಕೊಂಡ 26 ವಿದ್ಯಾರ್ಥಿಗಳಿಗೆ  ಕೌನ್ಸೆಲಿಂಗ್ ನಡೆಸಿ  ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗಿತ್ತು. ಈ ಬಾರಿ ರಿಜಿಸ್ಟ್ರೇಷನ್ ಮಾಡಿದ 68 ವಿದ್ಯಾರ್ಥಿಗಳಿಗೆ ಈಗಾಗಲೇ ಸ್ಕಾಲರ್‌ಶಿಪ್ ವಿತರಿಸಲಾಗಿದ್ದು, ಬಾಕಿಯಿರುವ 67 ವಿದ್ಯಾರ್ಥಿಗಳಿಗೆ ಜೂನ್ 30ರ ಒಳಗಾಗಿ ಸ್ಕಾಲರ್‌ಶಿಪ್ ವಿತರಿಸಲಾಗುವುದು.
30 ವಿದ್ಯಾರ್ಥಿಗಳು ಇನ್ನೂ ಕೌನ್ಸೆಲಿಂಗ್ ಬಾಕಿಯಿದ್ದು, ಅಂತಹ ವಿದ್ಯಾರ್ಥಿಗಳು ಕೂಡಲೇ ಸಂಬಂಧಪಟ್ಟ ಕೌನ್ಸಿಲರ್‌ಗಳನ್ನು  ಫೋನ್ ಅಥವ ಈಮೇಲ್ ಮೂಲಕ ಸಂಪರ್ಕಿಸಬಹುದು.


ಈ ಸಾಲಿನ ಸ್ಕಾಲರ್ ಶಿಪ್ ಯೋಜನೆ ಕೊನೆಗೊಂಡಿದ್ದು ನೀಟ್ ಲಾಂಗ್‌ಟರ್ಮ್ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಮಾತ್ರ ಪ್ರಸ್ತುತ ಮುಂದುವರಿಸಲಾಗಿದೆ. ಇದಕ್ಕಾಗಿ ಜೂನ್ 1ರಂದು ಕಲ್ಲೇಗ ಮಸೀದಿ ಸಭಾಂಗಣದಲ್ಲಿ ಪೂರ್ಣ ಸಾಮರ್ಥ್ಯ ಪರೀಕ್ಷೆ ನಡೆಸಿದ್ದು ಅದರಲ್ಲಿ 23 ವಿದ್ಯಾರ್ಥಿಗಳು ಭಾಗವಹಿಸಿದ್ದರು. ನೀಟ್ ಬಗ್ಗೆ ಸಂಪೂರ್ಣ ವರದಿ ಸಿಕ್ಕಿದ ಬಳಿಕ ಅರ್ಹರಿಗೆ ಸ್ಕಾಲರ್‌ಶಿಪ್ ನೀಡಲಾಗುವುದು ಎಂದುಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್‌ನ ಚೇರ್‌ಮೆನ್ ಅಮ್ಜದ್ ಖಾನ್ ಪೋಳ್ಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!