ತಿಂಗಳಾಡಿ: ದರ್ಬೆ ಅಂಗನವಾಡಿಯಲ್ಲಿ ಕಳ್ಳತನ
ಪುತ್ತೂರು: ತಿಂಗಳಾಡಿ ಸಮೀಪದ ದರ್ಬೆ ಅಂಗನವಾಡಿ ಕೇಂದ್ರದಲ್ಲಿ ಕಳ್ಳತನ ನಡೆದಿದೆ. ಅಂಗನವಾಡಿಯ ಹಂಚು ತೆಗೆದು ಒಳನುಗ್ಗಿದ ಕಳ್ಳರು ಅಂಗನವಾಡಿಯಲ್ಲಿದ್ದ ಪಾತ್ರೆಗಳನ್ನು ಕದ್ದೊಯ್ದ ಘಟನೆ ಎ.4ರಂದು ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕ ಜಂಬೂರಾಜ್ ಮಹಾಜನ್, ಅಪರಾಧ ವಿಭಾಗದ ಎಸ್ಸೈ ಸುಶ್ಮಾ ಭಂಡಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.