ಟೀಂ ಇಂಡಿಯಾ ಆಟಗಾರರನ್ನು ನೋಡಲು ಮರವೇರಿ ಕುಳಿತ ಅಭಿಮಾನಿ!
ಮುಂಬೈನಲ್ಲಿ ಟಿ20 ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ವಿಜಯೋತ್ಸವ ಮೆರವಣಿಗೆ ಜುಲೈ 4ರಂದು ಅದ್ಧೂರಿಯಾಗಿ ನಡೆಯಿತು. ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳು ಈ ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.

ಈತನ್ಮಧ್ಯೆ ಹುಚ್ಚು ಅಭಿಮಾನಿಯೊಬ್ಬ ಆಟಗಾರರನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬೇಕೆಂದು ಮರವೇರಿ ಕುಳಿತು ಮೆರವಣಿಗೆಯನ್ನು ವೀಕ್ಷಿಸಿದ್ದಾನೆ. ಈತ ಮರವೇರಿ ಕುಳಿತ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.