ಅಂಬೇಡ್ಕರ್ ರಕ್ಷಣಾ ವೇದಿಕೆ ಅರಂತೋಡು ಘಟಕದ ಸಭೆ
ಸುಳ್ಯ: ಅಂಬೇಡ್ಕರ್ ರಕ್ಷಣಾ ವೇದಿಕೆಯ ಅರಂತೋಡು ಘಟಕದ ಮಾಸಿಕ ಸಭೆ ನ.12ರಂದು ಶ್ರೀ ಹರಿ ಕಾಂಪ್ಲೆಕ್ಸ್ ಅಡ್ತಲೆ ಅರ್ಜಿ ಕಜೆ ಅಂಬೇಡ್ಕರ್ ರಕ್ಷಣಾ ವೇದಿಕೆಯ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಅಂಬೇಡ್ಕರ್ ರಕ್ಷಣೆ ವೇದಿಕೆಯ ಅರಂತೋಡ ಘಟಕದ ಅಧ್ಯಕ್ಷರಾದ ನವೀನ ಕಲ್ಲುಗುಡ್ಡೆ ವಹಿಸಿದ್ದರು.
![](https://newsbites.in/wp-content/uploads/2023/11/IMG-20231112-WA0064-1024x576.jpg)
ವೇದಿಕೆಯಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ. ಘಟಕದ ಕಾರ್ಯದರ್ಶಿ ರಾಮಕೃಷ್ಣ ಅರಮನೆಗಯ ಸುಳ್ಯ ತಾಲೂಕು ಕಾರ್ಯದರ್ಶಿ ತೇಜಕುಮಾರ್ ಅರಮನೆಗಯ, ಮಹಿಳಾ ಘಟಕದ ಅಧ್ಯಕ್ಷೆ ಸೀತಮ್ಮ ಕುಂಪುಲಿ, ಮಹಿಳಾ ಕಾರ್ಯದರ್ಶಿ ಸುಮತಿ ಅರಮನೆಗಯ ಉಪಸ್ಥಿತರಿದ್ದರು.
![](https://newsbites.in/wp-content/uploads/2023/11/IMG-20231112-WA0062.jpg)
ನಂತರ ಸಭೆಯನ್ನುದ್ದೇಶಿಸಿ ಅರಂತೋಡು ಘಟಕದ ಅಧ್ಯಕ್ಷರಾದ ನವೀನ ಕಲ್ಲುಗುಡ್ಡೆ ಮತ್ತು ಕಾರ್ಯದರ್ಶಿಯಾದ ರಾಮಕೃಷ್ಣ ಅರಮನೆಗಯ ಮಾತನಾಡಿದರು.
![](https://newsbites.in/wp-content/uploads/2023/11/IMG-20231112-WA0065-1024x576.jpg)
ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಮಾತನಾಡಿ ಈಗಾಗಲೇ ಕನ್ನಡ ಶಾಲೆ ಉಳಿಸುವ ನಿಟ್ಟಿನಲ್ಲಿ ಸುಮಾರು ಎಂಟು ಶಾಲೆಗಳಲ್ಲಿ ಶ್ರಮದಾನವನ್ನು ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಮಾಡಿದ್ದೇವೆ ಇದರಲ್ಲಿ ಅರಂತೋಡು ಘಟಕದವರು 7 ಶಾಲೆಯ ಶ್ರಮದಾನ ಮಾಡಿದ್ದಾರೆ, ನಾಗಪಟ್ಟಣ ಘಟಕದವರು 1 ಶಾಲೆಯಲ್ಲಿ ಶ್ರಮದಾನ ಮಾಡಿದ್ದಾರೆ, ಇನ್ನು ಮುಂದೆ ಕೂಡ ಆದಷ್ಟು ಶಾಲೆಗಳ ಶ್ರಮದಾನವನ್ನು ಮಾಡಲು ನಮ್ಮ ಅಂಬೇಡ್ಕರ್ ರಕ್ಷಣಾ ವೇದಿಕೆ ಯಾವಾಗಲೂ ಸಿದ್ಧವಾಗಿರುತ್ತದೆ ಎಂದು ಹೇಳಿದರು.
![](https://newsbites.in/wp-content/uploads/2023/11/IMG-20231112-WA0066-1024x576.jpg)
ನಂತರ ಶ್ರಮದಾನ ಮಾಡಲು ಸದಸ್ಯರಿಗೆ ಅಂಬೇಡ್ಕರ್ ರಕ್ಷಣೆ ವೇದಿಕೆಯ ಹೆಸರನ್ನು ಬರೆದ ಟೀ ಶರ್ಟ್ ನ್ನು ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ವಿತರಿಸಿದರು. ತೇಜಕುಮಾರ್ ಅರಮನೆಗಯ ಸ್ವಾಗತಿಸಿ ಕಿಟ್ಟು ಅರಮನೆಗಯ ವಂದಿಸಿದರು.