ಕರಾವಳಿಕ್ರೈಂ

ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಕಚೇರಿ ಎದುರು ತಲವಾರು ಝಳಪಿಸಿದ ಯುವಕರು



ಪುತ್ತೂರು: ಪುತ್ತಿಲ ಪರಿವಾರದ ಪ್ರಮುಖರು, ಹಿಂದೂ ಸಂಘಟನೆಯ ಮುಖಂಡರೂ ಆದ ಅರುಣ್ ಕುಮಾರ್ ಪುತ್ತಿಲ ಅವರ ಕಚೇರಿ ಮುಂಭಾಗ ಯುವಕರು ತಲವಾರು ಪ್ರದರ್ಶನ ಮಾಡಿದ ಘಟನೆ ಮುಕ್ರಂಪಾಡಿಯಲ್ಲಿ ನ.10ರ ಶುಕ್ರವಾರ ಹಾಡಹಗಲೇ ನಡೆದಿದೆ.

ಪುತ್ತಿಲ ಬೆಂಬಲಿಗ ಮನೀಶ್ ಕುಲಾಲ್ ಎಂಬವರ ಮೇಲೆ ದಾಳಿ ಮಾಡಲು ಯತ್ನಿಸಲಾಗಿದೆ ಎನ್ನಲಾಗಿದ್ದು ಮನೀಷ್ ಈ ವೇಳೆ ಕಚೇರಿಯಲ್ಲಿ ಇರಲಿಲ್ಲ ಎನ್ನಲಾಗಿದೆ.

ತಲವಾರು ಹಿಡಿದು ದಾಳಿಗೆ ಮುಂದಾದ ಆರೋಪದಲ್ಲಿ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!