ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಕಚೇರಿ ಎದುರು ತಲವಾರು ಝಳಪಿಸಿದ ಯುವಕರು
ಪುತ್ತೂರು: ಪುತ್ತಿಲ ಪರಿವಾರದ ಪ್ರಮುಖರು, ಹಿಂದೂ ಸಂಘಟನೆಯ ಮುಖಂಡರೂ ಆದ ಅರುಣ್ ಕುಮಾರ್ ಪುತ್ತಿಲ ಅವರ ಕಚೇರಿ ಮುಂಭಾಗ ಯುವಕರು ತಲವಾರು ಪ್ರದರ್ಶನ ಮಾಡಿದ ಘಟನೆ ಮುಕ್ರಂಪಾಡಿಯಲ್ಲಿ ನ.10ರ ಶುಕ್ರವಾರ ಹಾಡಹಗಲೇ ನಡೆದಿದೆ.
![](https://newsbites.in/wp-content/uploads/2023/11/IMG_20231110_152719.jpg)
ಪುತ್ತಿಲ ಬೆಂಬಲಿಗ ಮನೀಶ್ ಕುಲಾಲ್ ಎಂಬವರ ಮೇಲೆ ದಾಳಿ ಮಾಡಲು ಯತ್ನಿಸಲಾಗಿದೆ ಎನ್ನಲಾಗಿದ್ದು ಮನೀಷ್ ಈ ವೇಳೆ ಕಚೇರಿಯಲ್ಲಿ ಇರಲಿಲ್ಲ ಎನ್ನಲಾಗಿದೆ.
ತಲವಾರು ಹಿಡಿದು ದಾಳಿಗೆ ಮುಂದಾದ ಆರೋಪದಲ್ಲಿ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.