ಮಹಿಷ ಮರ್ಧಿನಿ ದೇವರಿಗೆ ವಜ್ರದ ಸರ ಅರ್ಪಿಸಿದ ಪುತ್ತೂರು ಶಾಸಕರು
ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈಯವರು ನವರಾತ್ರಿ ಪ್ರಯುಕ್ತ ಕೋಡಿಂಬಾಡಿ ಶ್ರೀ ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ಚಂಡಿಕಾ ಹೋಮ ಮತ್ತು ತುಲಾಭಾರ ಸೇವೆ ಸಲ್ಲಿಸಿ ದೇವರಿಗೆ ವಜ್ರದ ಸಮರ್ಪಣೆ ಮಾಡಿದರು.
![](https://newsbites.in/wp-content/uploads/2023/10/IMG-20231019-WA0098.jpg)
ಬೆಳಿಗ್ಗೆ ದೇವಳದಲ್ಲಿ ಚಂಡಿಕಾಹೋಮ ,ವಿಶೇಷ ಪೂಜೆ ಮತ್ತು ತುಲಾಭಾರ ಸೇವೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಭಕ್ತಾದಿಗಳು ಶಾಸಕರ ಕುಟುಂಬಸ್ಥರು ಭಾಗವಹಿಸಿದ್ದರು. ಸೇವಾ ರೂಪದಲ್ಲಿ ತನ್ನ ಹುಟ್ಟೂರ ಆರಾಧ್ಯ ದೇವರಾದ ಮಹಿಷಮರ್ಧಿನಿಗೆ ವಜ್ರದ ಸರವನ್ನು ಸೇವಾರೂಪದಲ್ಲಿ ಸಮರ್ಪಿಸಿದರು. ಪೂಜೆಯ ಬಳಿಕ ಅನ್ನದಾನ ನಡೆಯಿತು.