ಕರಾವಳಿ

ಮೈದಾನಿಮೂಲೆ ಜುಮಾ ಮಸೀದಿ ಅಧ್ಯಕ್ಷರಾಗಿ ಉದ್ಯಮಿ ಯೂಸುಫ್ ಹಾಜಿ ಕೈಕಾರ 



ಪುತ್ತೂರು: ಮೈದಾನಿಮೂಲೆ ಜುಮಾ ಮಸೀದಿ ಅಧ್ಯಕ್ಷರಾಗಿ ಉದ್ಯಮಿ ಯೂಸುಫ್ ಹಾಜಿ  ಕೈಕಾರ ಆಯ್ಕೆಯಾಗಿದ್ದಾರೆ.  ಮಸೀದಿ ಗೌರವಾಧ್ಯಕ್ಷರಾದ ಅಸ್ಸಯ್ಯಿದ್ ಮುಝ್ಝಮ್ಮಿಲ್ ತಂಙಳ್ ಕಾಸರಗೋಡು ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಪ್ರಧಾನ ಕಾರ್ಯದರ್ಶಿಯಾಗಿ ಉದ್ಯಮಿ ಯೂಸುಫ್ ಮೈದಾನಿಮೂಲೆ ಹಾಗೂ ಕೋಶಾಧಿಕಾರಿಯಾಗಿ ಒಳಮೊಗ್ರು ಗ್ರಾ.ಪಂ ಉಪಾಧ್ಯಕ್ಷರಾದ ಅಶ್ರಫ್ ಉಜ್ರೋಡಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಉದ್ಯಮಿಗಳಾದ ಕೆ ಪಿ ಮುಹಮ್ಮದ್ ಮತ್ತು ರಫೀಕ್ ಅಲ್ ರಾಯ, ಜತೆ ಕಾರ್ಯದರ್ಶಿಗಳಾಗಿ ಮುನೀರ್ ಉಜ್ರೋಡಿ, ಅಝೀಝ್ ನೀರ್ಪಾಡಿ ಆಯ್ಕೆಯಾದರು.

ಯೂಸುಫ್ ಮೈದನಿಮೂಲೆ ಹಾಗೂ ಅಶ್ರಫ್ ಉಜ್ರೊಡಿ

ಸದಸ್ಯರಾಗಿ ಹಸೈನಾರ್ ಎಂ ಎಂ, ಹಂಝ ಉಜಿರೋಡಿ, ಮುಹಮ್ಮದ್ ಉಜ್ರೋಡಿ (ಮಾಮು), ಉಮರ್ ನೀರ್ಪಾಡಿ, ಮುಹಮ್ಮದ್ ಕುಂಞ್ಞಿ ಇಡಿಂಜಿಲ, ರಫೀಕ್ ಎಂ ಎಂ, ಕೆ ಎ ಅಬೂಬಕರ್, ಮೊಯ್ದೀನ್ ಉಜ್ರೋಡಿ, ಇಬ್ರಾಹಿಂ ಬಾಳಯ, ಮುಸ್ತಫಾ ಮುರ್ವ ಆಯ್ಕೆಯಾದರು. ಲೆಕ್ಕಪರಿಶೋಧಕರಾಗಿ ಹಾರೀಸ್ ಮುಗೇರು ಆಯ್ಕೆಯಾದರು.

Leave a Reply

Your email address will not be published. Required fields are marked *

error: Content is protected !!