ಕರಾವಳಿರಾಜಕೀಯ

ಪುತ್ತೂರಿನ ಬಿಜೆಪಿ ಮುಖಂಡ ಕಾಂಗ್ರೆಸ್ ಸೇರ್ಪಡೆ?
ಡಿ.15ಕ್ಕೆ ಮುಹೂರ್ತ ಫಿಕ್ಸ್…!?



ಪುತ್ತೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ವಲಯದಲ್ಲಿ ನಾನಾ ಕಸರತ್ತುಗಳು ನಡೆಯುತ್ತಲೇ ಇರುತ್ತದೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವುದು, ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವುದು, ಯಾವುದೂ ಬೇಡವೆಂದು ಇನ್ನೊಂದು ಪಕ್ಷಕ್ಕೆ ಸೇರುವುದು ಮಾಮೂಲಿ ಸಂಗತಿಯಾಗಿದೆ.

ಬಹುತೇಕ ಸಂದರ್ಭದಲ್ಲಿ ಕಾರ್ಯಕರ್ತರು ಪಕ್ಕಗಳಿಗೆ ಸೇರ್ಪಡೆಯಾಗುವುದು ಇದ್ದೇ ಇರುತ್ತದೆ. ಆದರೆ ಈ ಬಾರಿ ಪುತ್ತೂರು ಕ್ಷೇತ್ರ ಎಂದಿನಂತೆ ಇಲ್ಲ. ಈ ಬಾರಿ ಅಲ್ಲೋಲ ಕಲ್ಲೋಲ ಆಗುವ ಸಂಭವ ಇದೆ. ಯಾರು ಯಾವ ಪಕ್ಷ ಸೇರುತ್ತಾರೆ ಎಂದು ಯಾರಿಗೂ ಹೇಳಲು, ಊಹಿಸಲೂ ಸಾಧ್ಯವಾಗದ ಸ್ಥಿತಿ ಇದೆ.


ಒಬ್ಬರನ್ನೊಬ್ಬರು ಕಂಡರೆ ಆಗದ ಪರಿಸ್ಥಿತಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ನಿರ್ಮಾಣವಾಗಿದೆ. ಇದರ ಮುಂದುವರೆದ ಭಾಗವಾಗಿ ಪುತ್ತೂರಿನ ಪ್ರಭಾವಿ ಬಿಜೆಪಿ ಮುಖಂಡರೋರ್ವರು ಶೀಘ್ರದಲ್ಲೇ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿಯಿದ್ದು ಡಿ.15ಕ್ಕೆ ಮುಹೂರ್ತ ಫಿಕ್ಸ್ ಆಗಿದೆಯೆಂಬ ಪಕ್ಕಾ ಸುದ್ದಿಯೊಂದು ಹರಡಿದೆ. ಪಕ್ಷಕ್ಕೆ ಸೇರುವ ವ್ಯಕ್ತಿ ತನ್ನ ಅಪಾರ ಬೆಂಬಲಿಗರೊಂದಿಗೆ ಪುತ್ತೂರಿನಲ್ಲಿ ಸಮಾವೇಶವನ್ನೇ ನಡೆಸಿ ಸೇರಲಿದ್ದಾರೆ ಎನ್ನಲಾಗಿದ್ದು ಇದಕ್ಕಾಗಿ ಸರ್ವ ಸಿದ್ದತೆಯೂ ನಡೆಯುತ್ತಿದೆಯಂತೆ. ಈ ಸುದ್ದಿ ನಿಜವಾಗಲೂಬಹುದು.

Leave a Reply

Your email address will not be published. Required fields are marked *

error: Content is protected !!