ವಿಟ್ಲವನ್ನು ತಾಲೂಕು ಕೇಂದ್ರ ಹಾಗೂ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡುವಂತೆ ಆಗ್ರಹಿಸಿ ಶಾಸಕ ಅಶೋಕ್ ರೈಗೆ ಮನವಿ
ವಿಟ್ಲ: ವಿಟ್ಲವನ್ನು ತಾಲೂಕು ಕೇಂದ್ರ ಹಾಗೂ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡುವಂತೆ ಆಗ್ರಹಿಸಿ ವಿಟ್ಲ ತಾಲೂಕು ಹೋರಾಟ ಸಮಿತಿ ವತಿಯಿಂದ ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಬಿ ಕೆ ಬಶೀರ್, ಪ್ರ.ಕಾರ್ಯದರ್ಶಿ ರಮಾನಾಥ ವಿಟ್ಲ, ಉಪಾಧ್ಯಕ್ಷ ಹಸೈನಾರ್ ಕಡಂಬು, ಸುದರ್ಶನ್ ಪಡಿಯಾರ್, ಕಾನ ಈಶ್ವರಭಟ್, ರಾಮಣ್ಣ ಕರೋಪಾಡಿ, ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ರಾಮ ಮುಗೇರು, ಜಾಫರ್ ಖಾನ್, ಶ್ರೀಧರ್ ಶೆಟ್ಟಿ ಪೊಲ್ಯ, ಸದಾನಂದಗೌಡ ಸೇರಾಜೆ, ಇಕ್ಬಾಲ್ ವಿಟ್ಲ, ದಿನಕರ ಆಳ್ವ ವಿಟ್ಲ ಮೊದಲಾವರು ಉಪಸ್ಥಿತರಿದ್ದರು




