ಕರಾವಳಿಕ್ರೈಂ

ಪುತ್ತೂರು: ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ನ್ಯಾಯಾಲಯ


ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ:53/2025, ಕಲಂ:306 ಬಿ ಎನ್ ಎಸ್  ಪ್ರಕರಣದಲ್ಲಿ, ಆರೋಪಿತನಾದ ಸುಳ್ಯ, ಐವರ್ನಾಡು ನಿವಾಸಿ ಶಿವಪ್ರಸಾದ್ (41) ಎಂಬಾತನಿಗೆ, ಎ.ಎಸ್.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ, ಪುತ್ತೂರು ಇದರ ನ್ಯಾಯಾಧೀಶರಾದ  ದೇವರಾಜ್ ರವರು ವಿಚಾರಣೆ ನಡೆಸಿ, ಆರೋಪಿಗೆ 3 ವರ್ಷಗಳ  ಸಾದಾ ಸಜೆ ಹಾಗೂ  10,000  ರೂ ದಂಡ ವಿಧಿಸಿ ಆದೇಶಿಸಿದ್ದು ದಂಡ ಪಾವತಿಸಲು ತಪ್ಪಿದಲ್ಲಿ ಆರು ತಿಂಗಳ ಸದಾ ಕಾರವಾಸ ಶಿಕ್ಷೆ, ವಿಧಿಸಿ ಆದೇಶಿಸಿರುತ್ತಾರೆ.


ಸದ್ರಿ ಪ್ರಕರಣದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸುಷ್ಮ ಭಂಡಾರಿರವರು ಪ್ರಕರಣದ ವಿಚಾರಣೆ ನಡೆಸಿ, ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ತ್ವರಿತವಾಗಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಚೇತನಾದೇವಿರವರು ಸಮರ್ಥವಾಗಿ ವಾದ ಮಂಡನೆ ನಡೆಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!