ಪುತ್ತೂರಿಗೆ ಮೆಡಿಕಲ್ ಕಾಲೇಜು ಕೊಟ್ಟೇ ಕೊಡುತ್ತೇವೆ:ಸಿದ್ದರಾಮಯ್ಯ
ಪುತ್ತೂರು: ಪುತ್ತೂರಿಗೆ ಮೆಡಿಕಲ್ ಕಾಲೇಜು ಕೊಟ್ಟೇ ಕೊಡುತ್ತೇನೆ, ಎಷ್ಟೇ ಖರ್ಚು ಆದರೂ ಸರಿ, ಕೊಟ್ಟ ಮಾತು ಈಡೇರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಅ.20ರಂದು ಪುತ್ತೂರಿನಲ್ಲಿ ನಡೆದ ಅಶೋಕ ಜನಮನ ಬೃಹತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಈ ಮಾತು ಹೇಳಿದಾಗ ಸೇರಿದ್ದ ಜನಸ್ತೋಮ ಕರತಾಡನ ಮೂಲಕ ಜೈಕಾರ ಹಾಕಿದರು.
ಅಶೋಕ್ ರೈ ಮೆಡಿಕಲ್ ಕಾಲೇಜು ಬೇಡಿಕೆ ಇಟ್ಟಿದ್ದನ್ನು ಈಡೇರಿಸುತ್ತೇವೆ, ವಿರೋಧ ಪಕ್ಷದವರ ಅಪಪ್ರಚಾರ ನಂಬಬೇಡಿ ಎಂದು ಅವರು ಹೇಳಿದರು.





